ದೇಶ

ಪ್ರಧಾನಿ ಮೋದಿ ಎದುರಿಸಲು ಮನಮೋಹನ್ ಸಿಂಗ್ ಸಮರ್ಥ ವ್ಯಕ್ತಿ: ಪ್ರಕಾಶ್ ಅಂಬೇಡ್ಕರ್

Lingaraj Badiger
ಮುಂಬೈ: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರಿಗೆ ವಿರೋಧ ವ್ಯಕ್ತಪಡಿಸಿರುವ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಎದುರಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಸೂಕ್ತ ವ್ಯಕ್ತಿ ಎಂದು ಸೋಮವಾರ ಹೇಳಿದ್ದಾರೆ.
ಇಂದು ಪಂಡರಾಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಅವರು, ಕರ್ನಾಟಕದಲ್ಲಿ ಕಾಲುಭಾಗ ಅಧಿಕಾರ ಕಳೆದುಕೊಳ್ಳಲಾಗಿದೆ. ಉಳಿದ ದೇಶ ಪ್ರಧಾನಿ ಮೋದಿಯ ಹಿಡಿತದಲ್ಲಿದೆ. ಈಗ ಮೋದಿಯನ್ನು ಸಮರ್ಥವಾಗಿ ಎದುರಿಸಲು ಮನಮೋಹನ್ ಸಿಂಗ್ ಅವರೇ ಸೂಕ್ತ ವ್ಯಕ್ತಿ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇನ್ನು ಹೆಚ್ಚು ರಾಜಕೀಯದ ಅನುಭವ ಬೇಕು. ಆದರೆ ಪ್ರಧಾನಿ ಮೋದಿಯ ಸುಳ್ಳು ಪ್ರಚಾರವನ್ನು ಮಾಜಿ ಪ್ರಧಾನಿ ಯಶಸ್ವಿಯಾಗಿ ವಿರೋಧಿಸಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ಅಂಬೇಡ್ಕರ್ ಅವರು, ಬಿಜೆಪಿ ತನ್ನ ಗುರಿ ಸಾಧಿಸಲು ಎಂತಹ ಕೆಳಮಟ್ಟಕ್ಕೂ ಇಳಿಯುತ್ತದೆ ಎಂದರು.
SCROLL FOR NEXT