ನ್ಯಾಯಾಲಯ 
ದೇಶ

ಶರ್ಟ್ ಗಳಲ್ಲಿ ತೂತು: ವಾಷಿಂಗ್ ಮಷೀನ್ ತಯಾರಕರ ವಿರುದ್ಧ ಪ್ರಕರಣದ ದಾಖಲಿಸಿದ ಭೂಪ!

ಹೊಸದಾಗಿ ಖರೀದಿಸಿದ ವಾಷಿಂಗ್ ಮಷೀನ್ ನಲ್ಲಿ ಒಗೆದ ಶರ್ಟ್ ಗಳಲ್ಲಿ ತೂತು ಬಿದ್ದಿದೆ ಎಂದು ಆರೋಪಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ವಾಷಿಂಗ್ ಮಷೀನ್ ತಯಾರಕ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು: ಹೊಸದಾಗಿ ಖರೀದಿಸಿದ ವಾಷಿಂಗ್ ಮಷೀನ್ ನಲ್ಲಿ ಒಗೆದ ಶರ್ಟ್ ಗಳಲ್ಲಿ ತೂತು ಬಿದ್ದಿದೆ ಎಂದು ಆರೋಪಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ವಾಷಿಂಗ್ ಮಷೀನ್ ತಯಾರಕ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 
ಮಹಾಲಕ್ಷ್ಮಿ ಲೇಔಟ್ ನ ಶಶಿ ಕುಮಾರ್ ಎಂಬುವವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಗ್ರಾಹಕರ ಪರವಾದ ತೀರ್ಪು ನೀಡಿದ್ದು, ವಾಷಿಂಗ್ ಮಷೀನ್ ನ್ನು ದುರಸ್ತಿಗೊಳಿಸಬೇಕು ಇಲ್ಲವೇ ಹಣವನ್ನು ಮರುಪಾವತಿ ಮಾಡಬೇಕೆಂದು ಸಂಸ್ಥೆಗೆ ಸೂಚಿಸಿದೆ. 
2014 ರ ಏ.7 ರಂದು ಶಶಿ ಕುಮಾರ್ ಇಂದಿರಾನಗರದ ಹೋಂ ಅಪ್ಲೇಯನ್ಸ್ ನಿಂದ ಫ್ರಂಟ್ ಲೋಡ್ ವಾಷಿಂಗ್ ಮಷೀನ್ ಖರೀದಿಸಿದ್ದರು, ಈ ಮಷೀನ್ ನಲ್ಲಿ ಒಗೆದ ಬಟ್ಟೆಗಳಲ್ಲಿ ಸಣ್ಣ ಸಣ್ಣ ತೂತಾಗಿರುವುದನ್ನು ಗಮನಕ್ಕೆ ಬಂದಿತ್ತು, ಆದರಂಭದಲ್ಲಿ ಇದನ್ನು ನಿರ್ಲಕ್ಷಿಸದ್ದರಾದರೂ ತೂತುಗಳು ದೊಡ್ಡದಾಯಿತು.  ವಾರೆಂಟಿ ಅವಧಿಯಲ್ಲೇ ವಾಷಿಂಗ್ ಮಷೀನ್ ನಲ್ಲಿ ದೋಷವಿರುವುದು ಪತ್ತೆಯಾಗಿದೆ.  2015 ರ ಜೂ.9 ರಂದು ಸಂಸ್ಥೆಯ ಗ್ರಾಹಕರ ಸೇವೆಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಆದರೆ ಸಂಸಥೆಯ ತಂತ್ರಜ್ಞರು ನೀಡಿದ ಸಲಹೆಗಳನ್ನು ಪಾಲಿಸಿದ ಬಳಿಕವೂ ಸಮಸ್ಯೆ ಮುಂದುವರೆದಿದೆ. ಮತ್ತೊಂದು ದೂರು ನೀಡಿದ ಬಳಿಕ ಸಂಸ್ಥೆ ಬೇರೊಂದು ಮಷೀನ್ ನ್ನು ನೀಡುವುದಾಗಿ ಅಥವಾ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿತ್ತು. ಆದರೆ ನಂತರ ಮಷೀನ್ ನ್ನು ಕಾರ್ಖಾನೆಗೇ ತಂದು ಪರೀಕ್ಷೆ ಮಾಡಬೇಕೆಂದು ಸಂಸ್ಥೆ ಶಶಿ ಕುಮಾರ್ ಗೆ ಇ-ಮೇಲ್ ಕಳಿಸಿತ್ತು. ಶಶಿ ಕುಮಾರ್ ಅವರ ಬೇಡಿಕೆಗಳನ್ನು ಪರಿಗಣಿಸಲೂ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಗ್ರಾಹಕನಿಗೆ 32 ತಿಂಗಳ ಕಾನೂನು ಹೋರಾಟದ ನಂತರ ನ್ಯಾಯ ದೊರೆತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT