ಪ್ರತಿಭಟನಾಕಾರರು 
ದೇಶ

13 ಸಾವಿನ ನಂತರ ಲಂಡನ್‌ ಷೇರು ಮಾರುಕಟ್ಟೆಯಿಂದ ವೇದಾಂತ ಡೀಲಿಸ್ಟ್ ಗೆ ಯುಕೆ ಪ್ರತಿಪಕ್ಷ ಆಗ್ರಹ

ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಅಮಾಯಕ...

ಲಂಡನ್‌: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಅಮಾಯಕ ಜೀವಗಳು ಬಲಿಯಾಗಿದ್ದು, ವೇದಾಂತ ಕಂಪೆನಿಯನ್ನು ಲಂಡನ್‌ ಷೇರು ಮಾರುಕಟ್ಟೆಯಿಂದ ತೆಗೆದು ಹಾಕಬೇಕು(ಡೀಲಿಸ್ಟ್‌) ಎಂದು ಬ್ರಿಟನ್‌ ನ ಪ್ರತಿಪಕ್ಷ ಲೇಬರ್‌ ಪಾರ್ಟಿ ಒತ್ತಾಯಿಸಿದೆ.
ಕಳೆದ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಈ ಪುಂಡು ಕಂಪೆನಿಯಿಂದ(ವೇದಾಂತ) ಲಂಡನ್‌ ಹಣಕಾಸು ಮಾರುಕಟ್ಟೆಯ ಪ್ರತಿಷ್ಠೆಗೆ ಆಗುವ ಹಾನಿಯನ್ನು ತಡೆಯಲು ಅದನ್ನು ಷೇರು ಮಾರುಕಟ್ಟೆಯ ವಹಿವಾಟು ಪಟ್ಟಿಯಿಂದ ಕಿತ್ತು ಹಾಕುವುದೇ ಉತ್ತಮ ಎಂದು ಬ್ರಿಟನ್ ನ ಛಾಯಾ ಚಾನ್ಸ್ ಲರ್‌ ಜಾನ್‌ ಮೆಕ್ ಡೊನೆಲ್‌ ಅವರು ಹೇಳಿದ್ದಾರೆ.
ಈ ವಾರ ನಡೆದ ಪ್ರತಿಭಟನಾಕಾರರ ಹತ್ಯಾಕಾಂಡದ ನಂತರ ನಿಯಂತ್ರಕರು ಕಂಪನಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವೇದಾಂತ ಅನ್ನು ಈ ಕೂಡಲೇ ಡೀಲಿಸ್ಟ್ ಮಾಡಬೇಕು. ಈ ಮೂಲಕ ಷೇರು ಮಾರುಕಟ್ಟೆ ಆಡಳಿತದ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಜಾನ್ ಆಗ್ರಹಿಸಿದ್ದಾರೆ.
ಕಳೆದ ಮಂಗಳವಾರ ತುತುಕುಡಿಯ ವೇದಾಂತ ಕಂಪನಿಯ ಸ್ಟರ್ಲೈಟ್ ವಿರುದ್ಧ ನಡೆದಿದ್ದ ಹಿಂಸಾಚಾರದಲ್ಲಿ 13 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT