ಪುಣೆ: ಶುಲ್ಕ ಪಾವತಿಸಲು ವಿಫಲವಾದ 150 ವಿದ್ಯಾರ್ಥಿಗಳಿಗೆ ಟಿಸಿ ನೀಡಿದ ಶಾಲೆ! 
ದೇಶ

ಪುಣೆ: ಶುಲ್ಕ ಪಾವತಿಸಲು ವಿಫಲವಾದ 150 ವಿದ್ಯಾರ್ಥಿಗಳಿಗೆ ಟಿಸಿ ನೀಡಿದ ಶಾಲೆ!

ಪುಣೆ ಮೂಲದ ಝೀಲ್ ಎಜುಕೇಶನ್ ಸೊಸೈಟಿಯ ದ್ಯಾನಗಂಗಾ ಶಾಲೆ ಶುಲ್ಕ ಪಾವತಿಸುವುದಕ್ಕೆ ವಿಫಲವಾದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (ಟಿಸಿ ) ನೀಡಿದೆ.

ಮುಣೆ (ಮಹಾರಾಷ್ಟ್ರ): ಪುಣೆ ಮೂಲದ  ಝೀಲ್ ಎಜುಕೇಶನ್ ಸೊಸೈಟಿಯ ದ್ಯಾನಗಂಗಾ ಶಾಲೆ ಶುಲ್ಕ ಪಾವತಿಸುವುದಕ್ಕೆ ವಿಫಲವಾದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (ಟಿಸಿ) ನೀಡಿದೆ.
ದ್ಯಾನಗಂಗಾ ಶಾಲೆ ಪುಣೆಯ ಸಮೀಪ ಹಿಂಗ್ಲೆಯಲ್ಲಿದೆ. ಶಾಲಾ ಆಡಳಿತ ಮಂಡಳಿ ದೊಡ್ಡ ಪ್ರಮಾಣದ ಶುಲ್ಕ ಕೇಳುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
"ನಾವೀಗಾಗಲೇ ರೂ 30,000 ಶುಲ್ಕ ಹಾಗೂ 10,ಸಾವಿರ ರೂ. ಠೇವಣಿ ನೀಡಿದ್ದೇವೆ. ಠೇವಣಿ ಹಣದಲ್ಲೇ ಶುಲ್ಕವನ್ನು ಹೊಂದಾಣಿಕೆ ಮಾಡಿಕೊಳ್ಳಲು ನಾವು ಶಾಲೆಗೆ ಮನವಿ ಮಾಡಿದರೆ ಅವರು ಕೇಳಲು ತಯಾರಿಲ್ಲ" ಎಂದು ಪೋಷಕರು ಹೇಳಿದರು.
ಶಾಲೆಯ ತೀರ್ಮನವನ್ನು ಪ್ರ್ಶ್ನಿಸಿ ನಾಗರಿಕರೊಬ್ಬರು  ಝೀಝ್ ಎಜುಕೇಶನ್ ಸೊಸೈಟಿಗೆ ಬಾಬೆ ಹೈಕೋರ್ಟ್ ಮೊರೆ ಹೋಗಿದ್ದು ಕೋರ್ಟ್ ಸೊಸೈಟಿ ಹಾಗೂ ಶಾಲೆಗೆ ನೋಟೀಸ್ ಜಾರಿ ಮಾಡಿದೆ. ಇದಾದ ಬಳಿಕ ಶಾಲೆ ಆಡಳಿತ ಈ ತೀರ್ಮಾನಕ್ಕೆ ಬಂದಿದೆ. 
ನೋಟೀಸ್ ನಲ್ಲಿ ಹೇಳಿದಂತೆ ಶಾಲಾ ಶುಲ್ಕ ಪಾವತಿ ಮಾಡದಿದ್ದರೆ ಅಂತಹವರಿಗೆ ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರಹಾಕುವ ಅಧಿಕಾರ ಆಡಳಿತ ಮಂಡಳಿಗಿದೆ.ಝೀಝ್ ಸೊಸೈಟಿಯ  ಕಾನೂನು ಸಲಹೆಗಾರರಾದ ವಿಕ್ರಮ್ ದೇಶಮುಖ್ ಮಾತನಾಡಿ ನ್ಯಾಯಾಲಯದ ಆದೇಶದ ಪ್ರಕಾರ ಶಾಲೆ ವರ್ಗಾವಣಾ ಪತ್ರ ನೀಡಿದೆ ಎಂದಿದ್ದಾರೆ.
"2016-17ರಲ್ಲಿ ಅವರು ಶುಲ್ಕ ಪಾವತಿ ಮಾಡಿದ್ದಾರೆ, ಅದೇ ಪ್ರಮಾಣದ ಶುಲ್ಕವನ್ನು 2017-18, ಪಾವತಿ ಮಾಡಲು ಅವರೇಕೆ ಹಿಂಜರಿಯುತ್ತಾರೆ ಅರ್ಥವಾಗುವುದಿಲ್ಲ, ಶಾಲೆ ಅವರಿಗೆ ಶುಲ್ಕ ಪಾವತ್ರಿ ಮಾಡಲು ಏಳು ದಿನಗಳ ಅವಧಿಯನ್ನೂ ನೀಡಿತು, ಆದರೆ ಯಾರೊಬ್ಬರೂ ಶುಲ್ಕ ಪಾವತಿಸಲಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?