ಪುಣೆ: ಶುಲ್ಕ ಪಾವತಿಸಲು ವಿಫಲವಾದ 150 ವಿದ್ಯಾರ್ಥಿಗಳಿಗೆ ಟಿಸಿ ನೀಡಿದ ಶಾಲೆ! 
ದೇಶ

ಪುಣೆ: ಶುಲ್ಕ ಪಾವತಿಸಲು ವಿಫಲವಾದ 150 ವಿದ್ಯಾರ್ಥಿಗಳಿಗೆ ಟಿಸಿ ನೀಡಿದ ಶಾಲೆ!

ಪುಣೆ ಮೂಲದ ಝೀಲ್ ಎಜುಕೇಶನ್ ಸೊಸೈಟಿಯ ದ್ಯಾನಗಂಗಾ ಶಾಲೆ ಶುಲ್ಕ ಪಾವತಿಸುವುದಕ್ಕೆ ವಿಫಲವಾದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (ಟಿಸಿ ) ನೀಡಿದೆ.

ಮುಣೆ (ಮಹಾರಾಷ್ಟ್ರ): ಪುಣೆ ಮೂಲದ  ಝೀಲ್ ಎಜುಕೇಶನ್ ಸೊಸೈಟಿಯ ದ್ಯಾನಗಂಗಾ ಶಾಲೆ ಶುಲ್ಕ ಪಾವತಿಸುವುದಕ್ಕೆ ವಿಫಲವಾದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (ಟಿಸಿ) ನೀಡಿದೆ.
ದ್ಯಾನಗಂಗಾ ಶಾಲೆ ಪುಣೆಯ ಸಮೀಪ ಹಿಂಗ್ಲೆಯಲ್ಲಿದೆ. ಶಾಲಾ ಆಡಳಿತ ಮಂಡಳಿ ದೊಡ್ಡ ಪ್ರಮಾಣದ ಶುಲ್ಕ ಕೇಳುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
"ನಾವೀಗಾಗಲೇ ರೂ 30,000 ಶುಲ್ಕ ಹಾಗೂ 10,ಸಾವಿರ ರೂ. ಠೇವಣಿ ನೀಡಿದ್ದೇವೆ. ಠೇವಣಿ ಹಣದಲ್ಲೇ ಶುಲ್ಕವನ್ನು ಹೊಂದಾಣಿಕೆ ಮಾಡಿಕೊಳ್ಳಲು ನಾವು ಶಾಲೆಗೆ ಮನವಿ ಮಾಡಿದರೆ ಅವರು ಕೇಳಲು ತಯಾರಿಲ್ಲ" ಎಂದು ಪೋಷಕರು ಹೇಳಿದರು.
ಶಾಲೆಯ ತೀರ್ಮನವನ್ನು ಪ್ರ್ಶ್ನಿಸಿ ನಾಗರಿಕರೊಬ್ಬರು  ಝೀಝ್ ಎಜುಕೇಶನ್ ಸೊಸೈಟಿಗೆ ಬಾಬೆ ಹೈಕೋರ್ಟ್ ಮೊರೆ ಹೋಗಿದ್ದು ಕೋರ್ಟ್ ಸೊಸೈಟಿ ಹಾಗೂ ಶಾಲೆಗೆ ನೋಟೀಸ್ ಜಾರಿ ಮಾಡಿದೆ. ಇದಾದ ಬಳಿಕ ಶಾಲೆ ಆಡಳಿತ ಈ ತೀರ್ಮಾನಕ್ಕೆ ಬಂದಿದೆ. 
ನೋಟೀಸ್ ನಲ್ಲಿ ಹೇಳಿದಂತೆ ಶಾಲಾ ಶುಲ್ಕ ಪಾವತಿ ಮಾಡದಿದ್ದರೆ ಅಂತಹವರಿಗೆ ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರಹಾಕುವ ಅಧಿಕಾರ ಆಡಳಿತ ಮಂಡಳಿಗಿದೆ.ಝೀಝ್ ಸೊಸೈಟಿಯ  ಕಾನೂನು ಸಲಹೆಗಾರರಾದ ವಿಕ್ರಮ್ ದೇಶಮುಖ್ ಮಾತನಾಡಿ ನ್ಯಾಯಾಲಯದ ಆದೇಶದ ಪ್ರಕಾರ ಶಾಲೆ ವರ್ಗಾವಣಾ ಪತ್ರ ನೀಡಿದೆ ಎಂದಿದ್ದಾರೆ.
"2016-17ರಲ್ಲಿ ಅವರು ಶುಲ್ಕ ಪಾವತಿ ಮಾಡಿದ್ದಾರೆ, ಅದೇ ಪ್ರಮಾಣದ ಶುಲ್ಕವನ್ನು 2017-18, ಪಾವತಿ ಮಾಡಲು ಅವರೇಕೆ ಹಿಂಜರಿಯುತ್ತಾರೆ ಅರ್ಥವಾಗುವುದಿಲ್ಲ, ಶಾಲೆ ಅವರಿಗೆ ಶುಲ್ಕ ಪಾವತ್ರಿ ಮಾಡಲು ಏಳು ದಿನಗಳ ಅವಧಿಯನ್ನೂ ನೀಡಿತು, ಆದರೆ ಯಾರೊಬ್ಬರೂ ಶುಲ್ಕ ಪಾವತಿಸಲಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT