ಡಿಸಿಪಿ ಅಶೋಕ್ ಕುಮಾರ್ ದಿಕ್ಷಿತ್ ಎಂಬುವರು ರೈಲ್ವೆ ನಿಲ್ದಾಣದದ ಆವರಣದಲ್ಲಿ ಮುಸ್ಲಿಂ ದಂಪತಿಯನ್ನು ಅಸಭ್ಯವಾಗಿ ನಿಂದಿಸಿ, ಲಾಠಿಯಿಂದ ಥಳಿಸಿ ಚಿತ್ರಹಿಂಸೆ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಜಿಆರ್ಪಿ ನಿಲ್ದಾಣದ ಆವರಣದಲ್ಲಿ ಈ ಘಟನೆ ನಡೆದಿದ್ದು ವಿಡಿಯೋದಲ್ಲಿ ಅಶೋಕ್ ಕುಮಾರ್ ಅವರು ಮುಸ್ಲಿಂ ದಂಪತಿಯನ್ನು ಲಾಠಿಯಿಂದ ಥಳಿಸಿ, ಅಸಭ್ಯವಾಗಿ ನಿಂದಿಸಿರುವ ದೃಶ್ಯಗಳು ಸೆರೆಯಾಗಿದೆ.
ಈ ವಿಡಿಯೋವನ್ನು ಪರಿಶೀಲಿಸಿದ ಎಡಿಜಿ ಸಂಜಯ್ ಸಿಂಘಾಲ್ ಅವರು ಅಶೋಕ್ ಕುಮಾರ್ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ. ಅಶೋಕ್ ಕುಮಾರ್ ಅವರು ಅಕ್ಟೋಬರ್ 31ಕ್ಕೆ ನಿವೃತ್ತಿ ಹೊಂದಿದ್ದಾರೆ. ಜಿಆರ್ಪಿ ಮೊರಾದಾಬಾದ್ ಎಸ್ಪಿ ಅವರು ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ.