25 Indian labourers held captive in Malaysia: NGO 
ದೇಶ

ಮಲೇಷ್ಯಾದಲ್ಲಿ ಸಿಲುಕಿದ ಭಾರತದ 25 ಕಾರ್ಮಿಕರು!

ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಮಲೇಷ್ಯಾಗೆ ತೆರಳಿದ್ದ ಭಾರತದ 25 ಕಾರ್ಮಿಕರನ್ನು ನೇಮಕ ಮಾಡಿದ್ದ ಸಂಸ್ಥೆಯೇ ಸೆರೆಯಲ್ಲಿಟ್ಟುಕೊಂಡಿರುವುದು ಈಗ ಬಹಿರಂಗವಾಗಿದೆ.

ಕೋಲ್ಕತ್ತಾ: ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಮಲೇಷ್ಯಾಗೆ ತೆರಳಿದ್ದ ಭಾರತದ 25 ಕಾರ್ಮಿಕರನ್ನು ನೇಮಕ ಮಾಡಿದ್ದ ಸಂಸ್ಥೆಯೇ ಸೆರೆಯಲ್ಲಿಟ್ಟುಕೊಂಡಿರುವುದು ಈಗ ಬಹಿರಂಗವಾಗಿದೆ. 
ಕೋಲ್ಕತ್ತಾದ ಎನ್ ಜಿಒ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ರಾಷ್ಟ್ರೀಯ ಮಾನವ ಸಾಗಣೆ ವಿರೋಧಿ ಸಮಿತಿ ಕಾರ್ಮಿಕರನ್ನು ವಾಪಸ್ ಕರೆತರುವುದಕ್ಕೆ ವಿದೇಶಾಂಗ ಇಲಾಖೆಯ ನೆರವು ಕೇಳಿದೆ. ಮಲೇಷ್ಯಾದಲ್ಲಿ ಸಿಲುಕಿರುವ ಇಬ್ಬರು ಕಾರ್ಮಿಕರು ವಿಡಿಯೋ ಮಾಡಿದ ಬಳಿಕ ಈ ಮಾಹಿತಿ ಬಹಿರಂಗವಾಗಿದ್ದು, ಸಂಸ್ಥೆ ಕೇಂದ್ರ ವಿದೇಶಾಂಗ ಇಲಾಖೆಯ ನೆರವು ಕೇಳಿದೆ. ಕಾರ್ಮಿಕರನ್ನು ರಕ್ಷಿಸುವಂತೆ ಪ್ರಧಾನಿಗೆ ಪತ್ರವನ್ನೂ ಬರೆದಿರುವ ಸಂಸ್ಥೆ  ಮಲೇಷ್ಯಾದಲ್ಲಿ ಸಿಲುಕಿರುವ ಇಬ್ಬರು ಕಾರ್ಮಿಕರು ಜೀವ ಉಳಿಸುವುದಕ್ಕೆ ಯತ್ನಿಸುತ್ತಿರುವುದನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದು, ಕೂಡಲೇ ಕಾರ್ಮಿಕರ ರಕ್ಷಣೆಗೆ ಸ್ಪಂದಿಸಬೇಕೆಂದು ಮನವಿ ಮಾಡಲಾಗಿದೆ. 
ಕನಿಷ್ಟ 25 ಕಾರ್ಮಿಕರು ಬಂಧನದಲ್ಲಿರುವ ಸಾಧ್ಯತೆ ಇದ್ದು, ಜೀವನ ಪರ್ಯಂತ ಬಂಧನಕ್ಕೊಳಪಡಿಸುವುದಾಗಿ ನೇಮಕ ಮಾಡಿಕೊಂಡಿರುವ ಸಂಸ್ಥೆ ಬೆದರಿಕೆ ಹಾಕುತ್ತಿದೆ ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮ್ಯಾನ್ ಪವರ್ ಕನ್ಸ್ಟ್ರಕ್ಷನ್ಸ್ ಎಂಬ ಏಜೆನ್ಸಿ ಮೂಲಕ ಈ ಕಾರ್ಮಿಕರು ಮಲೇಷ್ಯಾಗೆ ಟೂರಿಸ್ಟ್ ವೀಸಾ ಪಡೆದು ಕೆಲಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT