ದೇಶ

ಮೇ ಡೇ ಇರುವುದು ಕಾರ್ಮಿಕರಿಗಾಗಿ, ಕಚೇರಿಗೆ ಹೋಗುವವರಿಗಾಗಿ ಅಲ್ಲ: ಬಿಪ್ಲಬ್ ದೇಬ್

Srinivas Rao BV
ಅಗರ್ತಲಾ: ಮೇ ಡೇ ಗೆ ನೀಡಲಾಗುವ ಸರ್ಕಾರಿ ರಜೆಯನ್ನು ಹಿಂಪಡೆದಿರುವ ತ್ರಿಪುರಾ ಸರ್ಕಾರದ ನಿರ್ಧಾರವನ್ನು ಸಿಎಂ ಬಿಪ್ಲದ್ ದೇಬ್ ಸಮರ್ಥಿಸಿಕೊಂಡಿದ್ದು, ಮೇ ಡೇ ಇರುವುದು ಕಾರ್ಮಿಕರಿಗಾಗಿ, ಸರ್ಕಾರಿ ಕಚೇರಿಗಳಿಗೆ ತೆರಳುವವರಿಗಾಗಿ ಅಲ್ಲ ಎಂದು ಹೇಳಿದ್ದಾರೆ. 
ಮೇ ತಿಂಗಳ ಮೊದಲ ದಿನ ಇರುವುದು ಕಾರ್ಮಿಕರಿಗಾಗಿಯೇ ಹೊರತು ಬೇರೆಯವರಿಗಾಗಿ ಅಲ್ಲ. ಮೇ ಡೇ ತಿಂಗಳ ರಜೆಯನ್ನು ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗಾಗಿ ಮಾತ್ರ ಮೀಸಲಿಡುವ ಮೂಲಕ ನ್ಯಾಯ ಒದಗಿಸಿದೆ ಎಂದು ಬಿಪ್ಲಬ್ ದೇಬ್ ಹೇಳಿದ್ದಾರೆ.  ನ.03 ರಂದು ತ್ರಿಪುರಾದ ಸರ್ಕಾರ ಮೇ ಡೇ ರಜೆಯನ್ನು ಕಾರ್ಮಿಕರಿಗಷ್ಟೇ ಸೀಮಿತಗೊಳಿಸಿ ಆದೇಶ ಹೊರಡಿಸಿತ್ತು. 
SCROLL FOR NEXT