ಬಿಜೆಪಿ ನಾಯಕ ಸುರೇಂದ್ರನ್ 
ದೇಶ

ಶಬರಿಮಲೆ ದೇವಾಲಯದ ಬಳಿ ಹೋಗಬೇಡಿ: ಬಿಜೆಪಿ ನಾಯಕ ಸುರೇಂದ್ರನ್ ಗೆ ಕೋರ್ಟ್ ಸೂಚನೆ

ಶಬರಿಮಲೆ ದೇವಾಲಯದ ವಿಷಯವಾಗಿ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ ಸುರೇಂದ್ರನ್ ಸೇರಿ 72 ಜನರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಶಬರಿಮಲೆ ದೇವಾಲಯದ ವಿಷಯವಾಗಿ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ ಸುರೇಂದ್ರನ್ ಸೇರಿ 72 ಜನರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 
ಬಿಜೆಪಿ ಪ್ರಧಾನಕಾರ್ಯದರ್ಶಿಯಾಗಿರುವ ಸುರೇಂದ್ರನ್ ಹಾಗೂ ಇನ್ನೂ ಇಬ್ಬರು ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದರು. ಅವರು ಭೇಟಿ ನೀಡಿದ್ದ ವೇಳೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದ್ದಿದ್ದರಿಂದ ಪೊಲೀಸರು ಮುಂದುವರೆಯದಂತೆ ಸುರೇಂದ್ರನ್ ಅವರಿಗೆ ಸಲಹೆ ನೀಡಿದ್ದರು. ಪೊಲೀಸ್ ಅಧಿಕಾರಿಗಳ ಸೂಚನೆ ಹೊರತಾಗಿಯೂ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ಸುರೇಂದ್ರನ್ ಹಾಗೂ ಇನ್ನೂ ಇಬ್ಬರನ್ನು ನ.18 ರಂದು ನಿಲಕ್ಕಲ್ ಬಳಿ ಬಂಧಿಸಲಾಗಿತ್ತು. 
ಈಗ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ ಬಿಜೆಪಿ ನಾಯಕನಿಗೆ ದೇವಾಲಯದ ಬಳಿ ಹೋಗದಂತೆ ಸೂಚನೆ ನೀಡಿದ್ದು  ರಣ್ಣಿ ತಾಲೂಕಿಗೇ ಪ್ರವೇಶಿಸಬಾರದೆಂದು ಹೇಳಿದೆ. ನಿಷೇಧ ಆದೇಶ ಇದ್ದ ಹೊರತಾಗಿಯೂ ದೇವಾಲಯದ ಒಳ ಭಾಗದಲ್ಲಿ ಅಯ್ಯಪ್ಪ ನಾಮಜಪ ಮಾಡುತ್ತಿದ್ದ 69 ಜನರನ್ನು ನಂತರ ಬಂಧಿಸಲಾಗಿತ್ತು.  ಒಟ್ಟಾರೆ 72 ಜನರನ್ನು ಬಂಧಿಸಿರುವ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ 72 ಜನರಿಗೆ ಜಾಮೀನು ಮಂಜೂರು ಮಾಡಿದೆ.  ಇದೇ ವೇಳೆ ಆರೋಪಿಗಳಿಗೆ ಕನಿಷ್ಟ 2 ತಿಂಗಳ ಕಾಲ ದೇವಾಲಯ ಪ್ರವೇಶಿಸದಂತೆ ಕೋರ್ಟ್ ಸೂಚನೆ ನೀಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT