ದೇಶ

ಲೋಕಸಭೆ ದಿನಾಂಕ ಘೋಷಣೆ ಬಳಿಕ ಬಿಜೆಪಿ ಜತೆ ಮೈತ್ರಿ ಕುರಿತು ನಿರ್ಧಾರ: ಪಳನಿಸ್ವಾಮಿ

Raghavendra Adiga
ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ 2019 ಲೋಕಸಭೆ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಕುರಿತಂತೆ ನಿರ್ಧರಿಸಲಾಗುತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಸೋಮವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ದೆಹಲಿಯಲ್ಲಿ ಭೇತಿಯಾದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ತಮಿಳುನಾಡು ಸಚಿವ ಡಿ.ಜಯಕುಮಾರ್ ಮತ್ತು ಮುಖ್ಯ ಕಾರ್ಯದರ್ಶಿ ಗಿರಿಜ ವೈದ್ಯನಾಥನ್ ಅವರೊಂದಿಗೆ  ಇಂದು ಪಳನಿಸ್ವಾಮಿ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಸರ್ಕಾರದ ಪರ ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅವುಗಳಲ್ಲಿ . ಅಣ್ಣಾದೊರೈ ಮತ್ತು ಜೆ. ಜಯಲಲಿತಾ ಅವರುಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಸಹ ಸೇರಿತ್ತು.ಅಲ್ಲದೆ ಚೆನ್ನೈ ಸೆಂಟ್ರಲ್ ರೈಲ್ವೆ ಗೆ ಎಂಜಿಆರ್ ಹೆಸರನ್ನಿಡುವಂತೆ ಸಹ ಕೇಳಲಾಗಿದೆ.
ಅಲ್ಲದೆ ತಮಿಳುನಾಡಿನ ಮಧುರೈ ಹಾಗೂ ಥೋಪರ್ ನಲ್ಲಿ ಏಮ್ಸ್ ಆಸ್ಪತ್ರೆಗಳನ್ನು ಪ್ರಾರಂಭಿಸುವಂತೆಯೂ ಅವರು ಪ್ರಧಾನಿಗೆ ಒತ್ತಾಯಿಸಿದ್ದಾರೆ.
ಪ್ರಧಾನಿಗಳ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ  ಪಳನಿಸ್ವಾಮಿ "ಇನ್ನೂ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿಲ್ಲ, ದಿನಾಂಕ ಪ್ರಕಟವಾದ ಬಳಿಕ ಬಿಜೆಪಿಯೊಂದಿಗೆ ತಮ್ಮ ಮೈತ್ರಿಯ ಕುರಿತು ನಿರ್ಹರಿಸುತೇವೆ" ಎಂದಿದ್ದಾರೆ.
ಡೀಸೆಲ್ ಮತ್ತು ಪೆಟ್ರೋಲ್ ಗಳ ಬೆಲೆ ಏರಿಕೆ ಬಗೆಗೆ ರಾಜ್ಯದ ಕ್ರಮವೇನು ಎಂದು ಪ್ರಶ್ನಿಸಲು ಅವರು : "ಒಂದು ದೊಡ್ಡ ಸಂಖ್ಯೆಯ ಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಇದಾಗಲೇ ನಾನಾ ಕಾರ್ಯ್ಕ್ರ್ಮಗಳನ್ನು ಹಮ್ಮಿಕೊಂಡಿದೆ.ಯೋಜನೆಗಳ ದೃಷ್ಟಿಯಿಂದ ಆರ್ಥಿಕ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಸಮಸ್ಯೆಯನ್ನು ಪರಿಗಣಿಸುತ್ತೇವೆ." ಎಂದರು.
ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಹಾಗೂ ಟಿಟಿವಿ ದಿನಕರನ್ ನಡುವೆ ನಡೆದ ಮಾತಿನ ಚಕಮಕಿ ಕುರಿತಂತೆ ಸಹ ಪಳನಿಸ್ವಾಮಿ ಯಾವ ಸ್ಪಷ್ಟನೆ ನೀಡಲಿಲ್ಲ. ವಿವಾದದ ಕುರಿತು ಒಪಿಎಸ್ ಇದಾಗಲೇ ವಿವರಣೆ ನೀಡಿದ್ದಾರೆ. ಈ ಸಂಬಂಧ ಮತ್ತೆ ನಾನೇನೂ ಸ್ಪಷ್ಟನೆ ನೀಡುವುದು ಉಳಿದಿಲ್ಲ ಎಂದರು.
SCROLL FOR NEXT