ದೇಶ

ಮಧ್ಯ ಪ್ರದೇಶ: ಎಸ್ಸಿ/ಎಸ್ಟಿ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ

Lingaraj Badiger
ವಿದಿಶಾ:ಯುವಕನೊಬ್ಬ ತನ್ನ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಅಡಿ ಸುಳ್ಳು ಕೇಸ್ ದಾಖಲಿಸಬಹುದು ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ರವಿ ಎಂದು ಗುರುತಿಸಲಾಗಿದ್ದು, ರವಿ ತಂದೆ ರಾಜೇಂದ್ರ ಸಿಂಗ್ ರಜಪೂತ್ ಅವರು ಅಕ್ಟೋಬರ್ 19ರಂದು ರಾತ್ರಿ ಸುಂದರ್ ಲಾಲ್ ಎಂಬುವವರ ಜತೆ ಜಗಳ ಮಾಡಿಕೊಂಡಿದ್ದರು. ಈ ವೇಳೆ ಸುಂದರ್ ಲಾಲ್, ರಾಜೇಂದ್ರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಅಡಿ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. 
ಕೇಸ್ ಗೆ ಹೆದರಿದ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT