ವಿಜಯ್ ಶೇಖರ್ ಶರ್ಮಾ 
ದೇಶ

ಪೇಟಿಎಂ ಬಾಸ್ ನಿಂದಲೇ ಹಣ ಪೀಕಲು ಯತ್ನಿಸಿದ ಸಂಸ್ಥೆಯ ಸೆಕ್ರೆಟರಿ ಸೇರಿ ಮೂವರು ಉದ್ಯೋಗಿಗಳ ಬಂಧನ!

ಇ-ವಾಲೆಟ್ ದೈತ್ಯ ಪೇಟಿಎಂ ನ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಂದ 20 ಕೋಟಿ ಹಣ ಪೀಕಲು ಯತ್ನಿಸಿದ್ದ ಅರೋಪದ ಅಡಿ ಪೇಟಿಎಂ ನ 3 ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇ-ವಾಲೆಟ್ ದೈತ್ಯ ಪೇಟಿಎಂ ನ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಂದ 20 ಕೋಟಿ ಹಣ ಪೀಕಲು ಯತ್ನಿಸಿದ್ದ ಅರೋಪದ ಅಡಿ ಪೇಟಿಎಂ ನ 3 ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಂಸ್ಥೆ ಸಂಗ್ರಹಿಸಿಟ್ಟಿದ್ದ ಖಾಸಗಿ ಮಾಹಿತಿಗಳನ್ನು ಕದ್ದು ಅದನ್ನು ಸೋರಿಕೆ ಮಾಡುವುದಾಗಿ ಪೇಟಿಎಂ ನ ಕಾರ್ಯದರ್ಶಿ ಸೇರಿದಂತೆ ಮೂವರು ಉದ್ಯೋಗಿಗಳು ಸಂಸ್ಥೆಯ ಸ್ಥಾಪಕ ವಿಜಯ್ ಶೇಖರ್ ಶರ್ಮಾಗೆ ಬೆದರಿಕೆ ಹಾಕುತ್ತಿದ್ದರು ಎಂದು ಕಾರ್ಯಾಚರಣೆ ನಡೆಸಿರುವ ನೋಯ್ಡಾ ಪೊಲೀಸರು ಹೇಳಿದ್ದಾರೆ. 
ಈ ಬೆದರಿಕೆ ಷಡ್ಯಂತ್ರದಲ್ಲಿ ವಿಜಯ್ ಶೇಖರ್ ಶರ್ಮಾ ಅವರ ಕಾರ್ಯದರ್ಶಿ ಆಕೆಯ ಪತಿ, ಸಂಸ್ಥೆಯ ಮತ್ತೋರ್ವ ಉದ್ಯೋಗಿ ದೇವೇಂದ್ರ ಕುಮಾರ್ ಹಾಗೂ ಸಂಸ್ಥೆಯ ಕೋಲ್ಕತ್ತಾ ವಿಭಾಗದ ಉದ್ಯೋಗಿಯಾಗಿರುವ ರೋಹಿತ್ ಚೋಮಲ್ ಎಂಬುವವರು ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
ತಮಗೆ ಬೆದರಿಕೆ ಬರುತ್ತಿರುವುದರ ಬಗ್ಗೆ ವಿಜಯ್ ಶೇಖರ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮಿತ್ ಶಾ 'ಉಪನ್ಯಾಸ' ಕೇಳುವ ಆಸಕ್ತಿ ಈಗ ನಮ್ಮಲ್ಲಿ ಉಳಿದಿಲ್ಲ; ಅವರ ವರ್ಚಸ್ಸಿನ 'ಬಲೂನ್' ಟುಸ್ ಆಗಿದೆ: ರಾಹುಲ್ ಗಾಂಧಿ

ಡೇಟಿಂಗ್ ಆ್ಯಪ್‌, ಇಂಟಿಮೇಟ್ ಫೋಟೋಗಳು': ಯುವಕರಿಗೆ ಬಲೆ ಬೀಸಿದ ಯುವತಿ; ಬರೋಬ್ಬರಿ ₹6 ಕೋಟಿ ವಂಚನೆ!

ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಪ್ರತಿಪಕ್ಷಗಳ ಬೇಡಿಕೆ: 'ಉತ್ತರಿಸಲು ಸಿದ್ಧ'- ಅಮಿತ್ ಶಾ ಪ್ರತಿಕ್ರಿಯೆ

ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್– ವಸತಿ ಖಾತೆ?

ಪರಪ್ಪನ ಅಗ್ರಹಾರ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್ ಪತ್ತೆ: ಮಾಜಿ ಸಂಸದನ ವಿರುದ್ಧ ಕೇಸ್ ದಾಖಲು