ಮಧ್ಯಪ್ರದೇಶ ಚುನಾವಣಾ ಸಮಾವೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ವಿರುದ್ಧ ಪನಾಮ ಪೇಪರ್ ಹಗರಣದ ಆರೋಪ ಮಾಡಿದ್ದ ರಾಹುಲ್ ಗಾಂಧಿ ತಮಗೆ ಗೊಂದಲ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಪನಾಮ ಹಗರಣದ ಆರೋಪ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ್ ಚೌಹಾಣ್ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ದೇಶಾದ್ಯಂತ ಹಲವು ಭ್ರಷ್ಟಾಚಾರ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಗೊಂದಲದಲ್ಲಿ ಪನಾಮ ಹಗರಣದ ಆರೋಪ ಮಾಡಿಬಿಟ್ಟೆ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಎಷ್ಟು ವ್ಯಾಪಕವಾದ ಹಗರಣಗಳಿವೆ ಎಂದರೆ ನಾನು ಗೊಂದಲಕ್ಕೀಡಾಗಿ ಪನಾಮ ಪೇಪರ್ಸ್ ಹಗರಣದ ಆರೋಪ ಮಾಡಿಬಿಟ್ಟೆ, ಆದರೆ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರನ ವಿರುದ್ಧ ಪನಾಮ ಪೇಪರ್ ಹಗರಣದ ಆರೋಪವಿಲ್ಲ, ಬದಲಾಗಿ ಇ-ಟೆಂಡರಿಂಗ್ ಹಾಗೂ ವ್ಯಾಪಂ ಹಗರಣದ ಆರೋಪಗಳಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.