ಮುಖ್ಯಮಂತ್ರಿ ವಸುಂಧರಾ ರಾಜೇ 
ದೇಶ

ರಾಜಸ್ತಾನ: ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸರ್ಕಾರದಿಂದ ಉಚಿತ ಮೊಬೈಲ್ ಪೋನ್

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜಸ್ತಾನ ಸರ್ಕಾರ ಶೀಘ್ರದಲ್ಲಿಯೇ ಬಾಮಶಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಮೊಬೈಲ್ ಪೋನ್ ಗಳನ್ನು ನೀಡುತ್ತಿದೆ.

ಜೈಪುರ : ಪ್ರಧಾನಮಂತ್ರಿ  ನರೇಂದ್ರಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನ ಪ್ರೋತ್ಸಾಹಿಸುವ  ನಿಟ್ಟಿನಲ್ಲಿ  ರಾಜಸ್ತಾನ ಸರ್ಕಾರ ಶೀಘ್ರದಲ್ಲಿಯೇ  ಬಾಮಶಾ ಯೋಜನೆಯಡಿ  ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಮೊಬೈಲ್ ಪೋನ್ ಗಳನ್ನು ನೀಡುವುದಾಗಿ ಹೇಳಿದೆ.

ಸರ್ಕಾರ ಅನುಷ್ಠಾನಗೊಳಿಸಿರುವ  ಯೋಜನೆಗಳ ಆರ್ಥಿಕ ಮತ್ತು  ಆರ್ಥಿಕೇತರ ಅನುಕೂಲಗಳನ್ನು  ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ದೊರಕಿಸುವುದು ಈ ಯೋಜನೆಯ ಗುರಿಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಪೋನ್ ಗಳನ್ನು ಪಡೆಯಲಿದ್ದಾರೆ.

ಮೊಬೈಲ್ ಪೋನ್ ಗಳಲ್ಲಿರುವ ಬಟನ್  ಒತ್ತುವ ಮೂಲಕ ಬಡವರು ಸಹ ಎಲ್ಲಾ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತಹ ಹೊಸ ಅಪ್ಲಿಕೇಷನ್ ವೊಂದನ್ನು  ಅಳವಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದ ಸರ್ಕಾರ ತಿಳಿಸಿದೆ.

ರಾಜಸ್ತಾವನ್ನು  ಹೊರ ಜಗತ್ತಿಗೆ ಸಂಪರ್ಕಿಸುವ ನಿಟ್ಟಿನಲ್ಲಿ 5 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಉಚಿತವಾಗಿ ವೈ ಪೈ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ತಿಳಿಸಿದೆ. ಈ  ಕಾರ್ಯಕ್ರಮ ಸೆಪ್ಟೆಂಬರ್ 1 ರಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ.

ಜನರಿಗೆ ತಂತ್ರಜ್ಞಾನ  ಹೆಚ್ಚಿಸಲು ಸರ್ಕಾರ ಇದೇ ಮೊದಲ ಬಾರಿಗೆ ಇಂತಹ ಕ್ರಮಕ್ಕೆ ಮುಂದಾಗಿಲ್ಲ. ಡಿಜಿಟಲ್ ಪಾವತಿಗಾಗಿ ಆಗಸ್ಟ್ 29 ರಂದು   ಬಾಮಶಾ ವ್ಯಾಲೆಟ್ ಮೊಬೈಲ್ ನ್ನು ವಸುಂಧರಾ ರಾಜೇ  ಬಿಡುಗಡೆ ಮಾಡಿದ್ದರು. ಅಲ್ಲದೇ ಈ ಹಿಂದೆ ದೌಸಾ, ಶ್ರೀಗಂಗಾನಗರ, ಬಕೇರ್, ಬಿಲ್ವಾರ, ಕಾರೌಲಿ ಮತ್ತು ದೊಲ್ಪುರ್ ನಲ್ಲಿ ಅಭಯ್ ಕಮಾಂಡ್ ಕೇಂದ್ರಗಳನ್ನು ನಿರ್ಮಾಣ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ayodhya: ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಆರೋಪಿಗಳ ವಿರುದ್ಧ FIR ದಾಖಲು!

ಮತ್ತೆ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ಕೆಟ್ಟುನಿಂತ ರೈಲು; ಕೆಲಕಾಲ ಸಂಚಾರದಲ್ಲಿ ವ್ಯತ್ಯಯ!

T20 WWC: 4 ಕ್ಯಾಚ್ ಕೈಚೆಲ್ಲಿ ಮತ್ತೆ ಕಳಪೆ ಫೀಲ್ಡಿಂಗ್, ಹೀನಾಯ ದಾಖಲೆ; 137 ರನ್ ಟಾರ್ಗೆಟ್ ಕೊಟ್ಟ ಬಾಂಗ್ಲಾ, Video!

ಶಿವರಾಜ್ ಸಿಂಗ್ ಚೌಹಾಣ್ ಪುತ್ರನಿಗೆ ಕ್ಷಮೆಯಾಚಿಸಿದ ರಾಹುಲ್ ಗಾಂಧಿ: ಪ್ರಕರಣ ವಜಾಗೊಳಿಸಿದ ಹೈಕೋರ್ಟ್

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!