ದೇಶ

ಇಮ್ರಾನ್ ಖಾನ್ ಬಗ್ಗೆ ಸಿಧು ಹೊಗಳಿಗೆ ಭಾರತಕ್ಕೆ ಮಾಡಿದ ಅಪಮಾನ: ಬಿಜೆಪಿ

Srinivas Rao BV
ನವದೆಹಲಿ: ಪಾಕಿಸ್ತಾನದ ಸರ್ಕಾರ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ ಪುರ ಗಡಿ ಕಾರಿಡಾರ್ ನ್ನು ಮುಕ್ತಗೊಳಿಸಲು ನಿರ್ಧರಿಸಿದ್ದಕ್ಕಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿದ್ದ ಸಿಧು ನಡೆಯನ್ನು ಬಿಜೆಪಿ ವಿರೋಧಿಸಿದೆ. 
ಸಿಧು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಭಾರತಕ್ಕೆ ಮಾಡಿರುವ ಅವಮಾನ ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತಕ್ಕೆ ಅವಮಾನ ಮಾಡುವುದು ಅಭ್ಯಾಸವಾಗಿಬಿಟ್ಟಿದೆ.  ಇದನ್ನು ಇಡೀ ದೇಶ ಗಮನಿಸುತ್ತಿದೆ ಈ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಶಹನವಾಜ್ ಹುಸೇನ್ ಆಗ್ರಹಿಸಿದ್ದಾರೆ. 
ಪಾಕ್ ಸೇನಾ ಮುಖ್ಯಸ್ಥರು ತನ್ನ ದೇಶದ ಸೈನಿಕರ ಸಾವಿಗೆ ರಕ್ತದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇತ್ತ ಸಿಧು ಪಾಕಿಸ್ತಾನಕ್ಕೆ ಧನ್ಯವಾದ ತಿಳಿಸುತ್ತಾರೆ, ಇದು ದುರದೃಷ್ಟಕರ ಎಂದು ಶಹನವಾಜ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
SCROLL FOR NEXT