ಚುನಾವಣೆಯಲ್ಲಿ ಹಣದ ದುರ್ಬಳಕೆ ತಡೆಯಲು ಸದ್ಯದ ಕಾನೂನು ಸಾಲದು: ಚುನಾವಣಾ ಆಯುಕ್ತ: ಮುಖ್ಯ ಚುನಾವಣಾ ಆಯುಕ್ತ
ನವದೆಹಲಿ: ಸದ್ಯದಲ್ಲೇ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನವಾಣೆ, 2019 ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಚುನವಾಣೆಗಳಲ್ಲಿ ಹಣದ ದುರ್ಬಳಕೆ ತಡೆಯುವುದು ಚುನಾವಣಾ ಆಯೋಗಕ್ಕೆ ಇರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ.
ಭಾರತದ ಚುನಾವಣಾ ಪ್ರಜಾಪ್ರಭುತ್ವಕ್ಕೆ ಇರುವ ಸವಾಲುಗಳು ಎಂಬ ವಿಷಯದ ಬಗ್ಗೆ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಒಪಿ ರಾವತ್, ಈಗಿರುವ ಕಾನೂನು ಚುನಾವಣೆಗಳಲ್ಲಿ ಹಣದ ದುರ್ಬಳಕೆಯನ್ನು ತಡೆಯುವುದಕ್ಕೆ ಸಾಲುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂಬ್ರಿಡ್ಜ್ ಅನಾಲಿಟಿಕಾ ರೀತಿಯ ಡಾಟಾ ಸಂಗ್ರಹ ಮಾಡುವ ಸಂಸ್ಥೆಗಳ ಬಗ್ಗೆಯೂ ಒಪಿ ರಾವತ್ ಮಾತನಾಡಿದ್ದು, ಡಾಟಾ ಸಂಗ್ರಹ, ಸುಳ್ಳು ಸುದ್ದಿಗಳು ದೇಶದ ಚುನಾವಣಾ ಪ್ರಕ್ರಿಯೆಗೆ ಮಾರಕವಾದದ್ದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos