ಮನವೇಂದ್ರ ಸಿಂಗ್ ಗೋಹಿಲ್ 
ದೇಶ

ದೇಶದ ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್‌ ಮಾಡಲು ಬಯಸಿದ್ದರು: ಸಲಿಂಗಿ ರಾಜ ಮನವೇಂದ್ರ

ದೇಶದ ಹಲವು ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್ ಮಾಡಲು ಬಯಸಿದ್ದರು ಎಂದು ಗುಜರಾತ್ ರಾಜಪೀಪ್ಲಾದ ಸಲಿಂಗಿ ರಾಜ ಮನ್ವೇಂದರ್ ಸಿಂಗ್ ಗೋಹಿಲ್ ಹೇಳಿದ್ದು ಈ ಹೇಳಿಕೆ...

ವಡೋದರ: ದೇಶದ ಹಲವು ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್ ಮಾಡಲು ಬಯಸಿದ್ದರು ಎಂದು ಗುಜರಾತ್ ರಾಜಪೀಪ್ಲಾದ ಸಲಿಂಗಿ ರಾಜ ಮನ್ವೇಂದರ್ ಸಿಂಗ್ ಗೋಹಿಲ್ ಹೇಳಿದ್ದು ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 
ತಾನು ಸಲಿಂಗಿ ರಾಜ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ಮನ್ವೇಂದರ್ ಅವರು ಆನಂದ್ ಜಿಲ್ಲೆಯ ವಲ್ಲಭ ವಿದ್ಯಾನಗರ್ ನಲ್ಲಿನ ಸರ್ದಾರ್ ಪಟೇಲ್ ಯುನಿವರ್ಸಿಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. 
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಸಲಿಂಗಿ ವಿವಾಹ ತಪ್ಪಲ್ಲ ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಇದನ್ನು ಉದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ಕೆಲ ಧಾರ್ಮಿಕ ಮುಖಂಡರು ನಮ್ಮ ವಿರುದ್ಧವಾಗಿ ಮಾತನಾಡಿದ್ದರು. ಇವೆಲ್ಲಾ ವಿದೇಶಗಳಲ್ಲಿ ನಡೆಯುತ್ತದೆ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ನಮ್ಮ ವಿರುದ್ಧ ಹೋರಾಡಲು ದೇಶದಲ್ಲಿನ ಹಿಂದೂಗಳು, ಮುಸ್ಲಿಂರು ಮತ್ತು ಕ್ರೈಸ್ತರು ಒಟ್ಟಾಗಿದ್ದರು. ಸಲಿಂಗಿ ವಿವಾಹ ಅಸ್ವಾಭಾವಿಕ ಅಪರಾಧಗಳು ಎಂದು ವಾದಿಸಿದ್ದರು ಎಂದು ಹೇಳಿದರು. 
ಸಲಿಂಗಿ ಸೆಕ್ಸ್ ಅಪರಾಧ ಎಂದು ವಾದಿಸುವ ಧಾರ್ಮಿಕ ಮುಖಂಡರೇ ನನ್ನ ಜೊತೆ ಸೆಕ್ಸ್ ಮಾಡಬೇಕು ಎಂದು ಬಯಸಿದ್ದು ಇದು ನಮ್ಮ ವಿರುದ್ಧ ಅವರ ಹೋರಾಟ ಬರೀ ಬೂಟಾಟಿಕೆ ಎಂದು ಹೇಳಿದರು.
ಇನ್ನು ಹಲವು ಧಾರ್ಮಿಕ ಮುಖಂಡರು ನಮ್ಮ ಬಳಿ ಬಂದು ನಿಮ್ಮ ಜೊತೆ ಸೆಕ್ಸ್ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇನ್ನು ವಾಸ್ತವವಾಗಿ ಎಚ್ಐವಿ ಪರೀಕ್ಷೆ ಮಾಡಿದರೇ ಕೆಲ ಆಶ್ರಮಗಳನ್ನು ಗುರಿಪಡಿಸುತ್ತೇನೆ. ಅಲ್ಲಿ ನನ್ನ ಸ್ವಯಂಸೇವಕರು ಮತ್ತು ಸಿಬ್ಬಂದಿಗಳು ಈ ಆಶ್ರಮದಲ್ಲಿ ಹೋಗುತ್ತಾರೆ ಮತ್ತು ಅಲ್ಲಿ ಎಚ್ಐವಿ ಸೋಕಿಂತ ವ್ಯಕ್ತಿಗಳು ಇರುವುದರಿಂದ ಎಚ್ಐವಿ ಪರೀಕ್ಷೆಗಳನ್ನು ನಡೆಸಲು ನಾನು ಕೇಳಿಕೊಳ್ಳುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT