ಆಧಾರ್ ವಿವಾದಗಳ ಬಗ್ಗೆ ಇಲ್ಲಿದೆ 7 ಕುತೂಹಲಕಾರಿ ವಿಷಯಗಳು! 
ದೇಶ

ಆಧಾರ್ ವಿವಾದಗಳ ಬಗ್ಗೆ ಇಲ್ಲಿದೆ 7 ಕುತೂಹಲಕಾರಿ ವಿಷಯಗಳು!

ಆಧಾರ್ ಕಾರ್ಡ್ ನ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದು, ಸಾಕಷ್ಟು ವಿವಾದಗಳಿಗೀಡಾಗಿದ್ದ ಆಧಾರ್ ನ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ನವದೆಹಲಿ: ಆಧಾರ್ ಕಾರ್ಡ್ ನ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದು, ಸಾಕಷ್ಟು ವಿವಾದಗಳಿಗೀಡಾಗಿದ್ದ ಆಧಾರ್ ನ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ. 
2016 ರಲ್ಲಿ ಜಾರಿಗೊಂಡ ಆಧಾರ್ ಕಾನೂನಿಗೂ ಮುನ್ನವೇ ಆಧಾರ್ ಗೆ ಸವಾಲುಗಳು ಎದುರಾಗಿದ್ದವು.  ಜನಸಾಮಾನ್ಯರ ಪ್ರತಿನಿತ್ಯದ ಬದುಕಿನಲ್ಲಿ ಪಡೆಯಬಹುದಾದ ಸೇವೆಗಳಿಗೆ ಆಧಾರ್ ನ್ನು ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ ಈ ವರೆಗೂ 139 ಅಧಿಸೂಚನೆಗಳನ್ನು ಹೊರಡಿಸಿದೆ.  ಆಧಾರ್ ಗೆ ಎದುರಾದ ಸವಾಲು ಹಾಗೂ ವಿವಾದಗಳೇನೆಂಬುದರ ಕುರಿತ ಮಾಹಿತಿ ಇಲ್ಲಿದೆ. 
  1. ಆಧಾರ್ ಡಾಟಾ ಬೇಸ್ ಗೆ ಸಂಬಂಧಿಸಿದಂತೆ ವರದಿ ಪ್ರಕಟಿಸಿದ್ದ ಹುಫಿಂಗ್ ಟನ್ ಪೋಸ್ಟ್, ಬಿಲಿಯನ್ ಗಟ್ಟಲೆ ಬಯೋಮೆಟ್ರಿಕ್ ಹಾಗೂ ವೈಯಕ್ತಿಕ ವಿವರಗಳನ್ನು ಹೊಂದಿರುವ ಆಧಾರ್ ನ ಡಾಟಾ ಬೇಸ್ ಗೆ ಅಗತ್ಯವುರುವ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂಬುದನ್ನು ಬಹಿರಂಗಪಡಿಸಿತ್ತು. 
  2. ಆಧಾರ್ ನ ಹೆಲ್ಪ್ ಲೈನ್ ನಂಬರ್ ಮೊಬೈಲ್ ನಲ್ಲಿ ಬಳಕೆದಾರರ ಅನುಮತಿಯೇ ಇಲ್ಲದೇ ಸೇವ್ ಆಗಿರುವುದು ಸಹ ಆಧಾರ್ ಎದುರಿಸಿದ್ದ ವಿವಾದಗಳಲ್ಲಿ ಒಂದಾಗಿದ್ದು, ಇದನ್ನು ಫ್ರಾನ್ಸ್ ನ ಭದ್ರತಾ  ತಜ್ಞರು ಪ್ರಶ್ನಿಸಿದ್ದರು. 
  3. ಟ್ರಾಯ್ ಅಧ್ಯಕ್ಷ ಆರ್ ಎಸ್ ಶರ್ಮಾ ತಮ್ಮ 12 ಅಂಕಿಗಳ ಆಧಾರ್ ನಂಬರ್ ನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ಹ್ಯಾಕರ್ ಗಳಿಗೆ ಸವಾಲೊಡ್ಡಿದ್ದರು. ಕೆಲವೇ ಗಂಟೆಗಳಲ್ಲಿ ಆರ್ ಎಸ್ ಶರ್ಮಾ ಆಧಾರ್ ನ್ನು ಹ್ಯಾಕ್ ಮಾಡಿ ವೈಯಕ್ತಿಕ ವಿವರಗಳನ್ನು ಸಾರ್ವಜನಿಕರ ಮುಂದಿಡಲಾಗಿತ್ತು.
  4. ಆಧಾರ್ ಗೆ ಸಂಬಂಧಿಸಿದಂತೆ ಋಣಾತ್ಮಕ ಅಂಶಗಳಿಗೆ ಉತ್ತರ ನೀಡುವ ಸಲುವಾಗಿ ಯುಐಡಿಎಐ ಸಾಮಾಜಿಕ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲು ಮುಂದಾದಾಗಲೂ ವಿವಾದ ಉಂಟಾಗಿತ್ತು. 
  5. ಸೇವೆಗಳನ್ನು ಪಡೆಯುವ ವೇಳೆ ದೇಶದ ನಾಗರಿಕರಿಂದ ಮೆಟಾ ಡಾಟಾವನ್ನು ಏಕೆ ಪಡೆಯುತ್ತೀರಿ ಎಂದು ಸುಪ್ರೀಂ ಕೋರ್ಟ್ ಯುಐಡಿಎಐ ನ ಪ್ರಶ್ನಿಸಿತ್ತು.  
  6. ಸೈಬರ್ ಭದ್ರತಾ ಸಂಶೋಧಕ ಕೊಡಾಲಿ ಶ್ರೀನಿವಾಸ್ 1.34 ಲಕ್ಷ ಆಧಾರ್ ಕಾರ್ಡ್ ಹೊಂದಿರುವವರ ಧರ್ಮ ಮತ್ತು ಜಾತಿಗಳಂತಹ ವಿವರಗಳನ್ನು ಹೊಂದಿರುವ ಸೂಕ್ಷ್ಮ ಮಾಹಿತಿಯು ಆಂಧ್ರಪ್ರದೇಶ ರಾಜ್ಯ ವಸತಿ ನಿಗಮದ ವೆಬ್ಸೈಟ್ನಿಂದ ಸೋರಿಕೆಯಾಗಿರುವುದನ್ನು ಬಹಿರಂಗಪಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!