ನವದೆಹಲಿ:ಈ ತಿಂಗಳಲ್ಲಿ ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂಬ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರ ಹೇಳಿಕೆಯನ್ನು ಭಾರತ ಬಲವಾಗಿ ತಿರಸ್ಕರಿಸಿದೆ.
ಪಾಕ್ ಸಚಿವರ ಹೇಳಿಕೆ ಅಸಹಜ ಹಾಗೂ ಬೇಜವಾಬ್ದಾರಿಯುತದಿಂದ ಕೂಡಿದ್ದು, ಯುದ್ದ ಪ್ರಚೋದಿತ ಹೇಳಿಕೆಯಾಗಿದೆ ಎಂದು ಭಾರತ ಹೇಳಿದೆ.
ಗಡಿಯಾಚೆಗಿನ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಭಾರತ ನಿರ್ಣಾಯಕ ರೀತಿಯಲ್ಲಿ ಪ್ರತಿಕ್ರಿಯಿಸುವ ಹಕ್ಕು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಭಾರತದ ಗಡಿಯಾಚೆಗಿನ ಉಗ್ರರ ದಾಳಿಗೆ ಹೊಣೆ ಹೊರಲು ಪಾಕಿಸ್ತಾನ ಸಿದ್ದವಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ.ಒಂದು ವೇಳೆ ದಾಳಿ ಸಂಭವಿಸಿದ್ದರೆ ಶಾಂತಿ ಮತ್ತು ಭದ್ರತೆ ಮೇಲೆ ಬೀರಬಹುದಾದ ಪರಿಣಾಮವನ್ನು ಯೋಚಿಸಬೇಕಾಗಿದೆ.ಇಂತಹ ಬೇಜವಾಬ್ದಾರಿಯುತ ನಡುವಳಿಕೆಯನ್ನು ಅಂತಾರಾಷ್ಟ್ರೀಯ ರಾಷ್ಟ್ರಗಳು ಗಮನಿಸಬೇಕು ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ