ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಕಾಂಗ್ರೆಸ್ ಪ್ರಧಾನಿಯನ್ನು ಲೇವಡಿ ಮಾಡಿದೆ.
ಅಕ್ಷಯ್ ಕುಮಾರ್ ನಡೆಸಿರುವ ಸಂದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲ ಪ್ರಧಾನಿಯನ್ನು, ಮೇ.23 ರಂದು ಜನರಿಂದ ತಿರಸ್ಕರಿಸಲ್ಪಡುವ ವಿಫಲ ರಾಜಕಾರಣಿಯಾಗಿದ್ದು, ಪರ್ಯಾಯ ಕೆಲಸಕ್ಕಾಗಿ ನಟನೆಯನ್ನು ಆಯ್ಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ-ಅಕ್ಷಯ್ ಕುಮಾರ್ ಸಂವಾದವನ್ನು ಹಲವು ಚಾನಲ್ ಗಳು ಪ್ರಸಾರ ಮಾಡಿದ್ದವು. ಅಕ್ಷಯ್ ಕುಮಾರ್ ಅದ್ಭುತ ನಟ, ನಾವು ಅವರನ್ನು ಇಷ್ಟಪಡುತ್ತೇವೆ. ಆತ ಯಶಸ್ವಿ ನಟ, ಆದರೆ ವಿಫಲ ರಾಜಕಾರಣಿಯೋರ್ವ ಈಗ ಅಕ್ಷಯ್ ಕುಮಾರ್ ಅವರಿಗಿಂತ ಉತ್ತಮ ನಟನಾಗಲು ಯತ್ನಿಸುತ್ತಿದ್ದಾರೆ ಎಂದು ರಣ್ದೀಪ್ ಸುರ್ಜೇವಾಲ ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.