ದೇಶ

ಅಮರನಾಥ ಯಾತ್ರಿಕರ ಗುರಿಯಾಗಿಸಿ ವಿದ್ವಂಸಕ್ಕೆ ಪಾಕ್ ಸೇನೆ ನೆರವು; ಅಮೆರಿಕ ರೈಫಲ್ ವಶ!

Vishwanath S
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ ಗಡಿ ಕಾಯಲು ಮತ್ತೆ 28 ಸಾವಿರ ಯೋಧರನ್ನು ನಿಯೋಜಿಸಿದ ಬೆನ್ನಲ್ಲೇ ಭಾರತೀಯ ಯೋಧರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು ವಿದ್ವಂಸಕ ಕೃತ್ಯಕ್ಕೆ ಉಗ್ರರಿಗೆ ಪಾಕಿಸ್ತಾನ ಸೇನೆ ನೆರವು ನೀಡಿದ್ದು ಬಹಿರಂಗವಾಗಿದ್ದು ಇಂದು ಭಾರತೀಯ ಸೇನೆ ಪಾಕ್ ಮೂಲದ ಉಗ್ರನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಭಾರತೀಯ ಸೇನೆ ಮತ್ತು ಜಮ್ಮು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಉಗ್ರನ ಸಂಚು ಅರಿತ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಉಗ್ರನನ್ನು ಹೊಡೆದುರುಳಿಸಿದೆ. ಇನ್ನು ಪಾಕಿಸ್ತಾನ ಸೇನೆ ಬಳಸುವ ಅಮೆರಿಕ ಉತ್ಪಾದಿತ ರೈಫಲ್ ಒಂದು ಉಗ್ರನ ಬಳಿ ಸಿಕ್ಕಿದೆ. 
ಸದ್ಯ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
SCROLL FOR NEXT