ದೇಶ

ಕಾಶ್ಮೀರ ಪ್ರವಾಸ ಬೇಡವೆ ಬೇಡ: ಯುಕೆ, ಜರ್ಮನಿ, ಆಸ್ಟ್ರೇಲಿಯಾ ನಾಗರಿಕರಿಗೆ ಖಡಕ್ ಎಚ್ಚರಿಕೆ

Vishwanath S
ನವದೆಹಲಿ: ಜಮ್ಮು ಕಾಶ್ಮೀರವನ್ನು ತೊರೆಯುವಂತೆ ಅಮರನಾಥ ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಸರ್ಕಾರಿ ನೀಡಿರುವ ಎಚ್ಚರಿಕೆಯ ಬೆನ್ನಲ್ಲೇ ಯುನೈಟೆಡ್ ಕಿಂಗ್ ಡಮ್, ಜರ್ಮನಿ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ತಮ್ಮ ನಾಗರಿಕರಿಗೆ ಕಾಶ್ಮೀರ ಪ್ರವಾಸ ಕೈಗೊಳ್ಳದಂತೆ ಸಲಹಾ ಸೂಚನೆ ನೀಡಿದೆ.
ಭಯೋತ್ಪಾದನಾ ಪೀಡಿತ ರಾಜ್ಯದಲ್ಲಿರುವಾಗ ಸ್ಥಳೀಯ ಆಡಳಿತದ ಮುನ್ನೆಚ್ಚರಿಕೆಗಳನ್ನು ಗಮನಿಸುವಂತೆ ಯುಕೆ ಸರ್ಕಾರ ತನ್ನ ಪ್ರಜೆಗಳಿಗೆ ತಿಳಿಸಿದೆ. ನವದೆಹಲಿಯಲ್ಲಿನ ಬ್ರಿಟಿಷ್ ಉನ್ನತ ನಿಯೋಗ ಸಹ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಗಮನಹರಿಸಿದೆ.
SCROLL FOR NEXT