ದೇಶ

2ನೇ ವಿವಾಹಕ್ಕೆ ಮಕ್ಕಳಿಂದ ಅಡ್ಡಿ: 75 ವರ್ಷದ ವಯೋವೃದ್ಧ ಆತ್ಮಹತ್ಯೆ

Nagaraja AB

ಬರೈಲಿ: ಎರಡನೇ ಮದುವೆಯಾಗಲು ಮಕ್ಕಳಿಂದ ಅಡ್ಡಿಯಾದ್ದರಿಂದ ಮನನೊಂದು 75 ನೇ ವರ್ಷದ ವಯೋವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೈಲಿಯಲ್ಲಿ ನಡೆದಿದೆ.

ಕಾನ್ಷಿರಾಮ್ ಕಾಲೋನಿಯ ನಿವಾಸಿ ಅರ್ಷದ್  ಆತ್ಮಹತ್ಯೆ ಮಾಡಿಕೊಂಡ ವಯೋವೃದ್ಧ. ಇವರ ಹೆಂಡತಿ ಮೃತಪಟ್ಟಿದ್ದರಿಂದ ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ,  ವಿವಾಹಕ್ಕೆ ಮಕ್ಕಳಿಂದ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆಯ ಎರಡನೇ ವಿವಾಹದ ವಿಷಯ ತಿಳಿದ ಮಕ್ಕಳು, ಇದರಿಂದಾಗಿ ಕುಟುಂಬದ ಮಾನ ಹೋಗುತ್ತದೆ ಎಂದು ಗುರುವಾರ ಜಗಳವಾಡಿದ್ದಾರೆ. ಇದರಿಂದಾಗಿ ಆತ  ಮನನೊಂದು ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. ಮೃತಪಟ್ಟ ಅರ್ಷದ್ ಅವರಿಗೆ ಐವರು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಗೆ ವಿವಾಹವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅರ್ಷದ್ ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT