ಸಂಗ್ರಹ ಚಿತ್ರ 
ದೇಶ

ತನ್ನ ಅಶ್ಲೀಲ ವೀಡಿಯೋ ನೊಡಿ ಬೈಯ್ದ ತಂದೆ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಮಾಡಿದ ಪುತ್ರಿ!

ಮಗಳು ಆಕೆಯ ಗೆಳಯನೊಡನೆ ಇರುವ ಅಶ್ಲೀಲ ವೀಡಿಯೋವನ್ನು ಕಂಡ ತಂದೆ ಮಗಳಿಗೆ ಗದರಿದ್ದಕ್ಕೆ ಕೋಪಗೊಂಡ ಮಗಳು ತಂದೆ ವಿರುದ್ಧವೇ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ರಾಂಚಿ: ಮಗಳು ಆಕೆಯ ಗೆಳಯನೊಡನೆ ಇರುವ ಅಶ್ಲೀಲ ವೀಡಿಯೋವನ್ನು ಕಂಡ ತಂದೆ ಮಗಳಿಗೆ ಗದರಿದ್ದಕ್ಕೆ ಕೋಪಗೊಂಡ ಮಗಳು ತಂದೆ ವಿರುದ್ಧವೇ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ದೈನಿಕ್ ಭಾಸ್ಕರ್ ವರದಿಯಂತೆ ತನ್ನ ಕೆಟ್ಟು ಹೋದ ಮೊಬೈಲ್ ಅನ್ನು ರಿಪೇರಿ ಮಾಡಿಕೊಡುವಂತೆ ಮಗಳು ತಂದೆಗೆ ನಿಡಿದಾಗ ಈ ಅಶ್ಲೀಲ ವಿಡಿಯೋ ಬೆಳಕಿಗೆ ಬಂದಿದೆ. ಮತ್ತು ತನ್ನ ಮಗಳು ಆಕೆಯ ಗೆಳಯನೊಡನೆ ಇರುವ ವಿಡಿಯೋ ನೋಡಿ ಆತ ಕೋಪಗೊಂಡಿದ್ದಾನೆ. ಬಳಿಕ ಮಗಳನ್ನು ಕರೆದು ಗದರಿದ್ದಾನೆ. 

ಇದಾದ ನಂತರ ಆಕೆಗೆ ಒಬ್ಬಳೇ ಹೊರಹೋಗದಂತೆ ನಿರ್ಬಂಧ ವಿಧಿಸಿದ ತಂದೆ ಒಂದೊಮ್ಮೆ ಹೊರಹೋಗಬೇಕಾದರೆ ತಾಯಿಯೊಡನೆ ಹೋಗುವಂತೆಯೂ ಹೇಳಿ ಕಟ್ಟಪ್ಪಣೆ ಮಾಡಿದ್ದಾನೆ.

ಇನ್ನು ಮೊಬೈಲ್ ನಲ್ಲಿದ್ದ ಆ ವೀಡಿಯೋವನ್ನು ನಾಲ್ಕೈದು ತಿಂಗಳ ಹಿಂದೆ ಚಿತ್ರೀಕರಿಸಲಾಗಿತ್ತು.

ತಂದೆ ವಿರುದ್ಧ ದೂರು

ಇದಾಗಿ ಆಕೆ ತನ್ನ ತಂದೆಯು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ತನ್ನ ವ್ಯಾಪ್ತಿಯ ಮಹಿಳಾ ಪೋಲೀಸ್ ಠಣೆಗೆ ಕರೆ ಮಾಡಿ ದೂರು ಸಲ್ಲಿಸಿದ್ದಾಳೆ. ಆದರೆ ಪೋಲೀಸ್ ಅಧಿಕಾರಿ ವಿಂಧ್ಯಾವಾಸಿನಿ ಸಿನ್ಹಾ ಅವರು ಲಿಖಿತ ದೂರು ನೀಡುವಂತೆ ಕೇಳಿದಾಗ ಆಕೆ ತನ್ನ ಚಿಕ್ಕಪ್ಪನೊಡನೆ ಹೋಗಿ ತಂದೆ ವಿರುದ್ಧ ಗಿಕ ಕಿರುಕುಳ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದಾಳೆ.

ಬಾಲಕಿ ಒಂದೊಂದು ಬಾರಿ ಒಂದೊಂದು ರೀತಿ ಹೇಳಿಕೆ ನಿಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪೋಲೀಸರು ಹೇಳಿದ್ದಾರೆ. ಸಧ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು  ಆರೋಪಗಳು ನಿಜವಾಗಿದ್ದರೆ, ತಂದೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿ ತನ್ನ ತಂದೆಯೊಂದಿಗೆ ಇರಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾಳೆ ಮತ್ತು ಚಿಕ್ಕಪ್ಪನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT