ಸಂಗ್ರಹ ಚಿತ್ರ 
ದೇಶ

ಅತ್ಯಾಚಾರ ನಡೆದಿಲ್ವಲ್ಲ, ನಡೆದ ಮೇಲೆ ಬಾ! ದೂರು ಕೊಡಲು ಹೋದ ಮಹಿಳೆಯನ್ನು ಹೊರಕಳಿಸಿದ ಪೋಲೀಸರು

ಉನ್ನಾವೋದಲ್ಲಿ ಬೆಂಕಿಗಾಹುತಿಯಾದ ಅತ್ಯಾಚಾರ ಸಂತ್ರಸ್ಥೆ ಸಾವಿಗೀಡಾಗಿರುವ ಘಟನೆ ಕಣ್ಣೆದುರಿಗಿರುವಾಗಲೇ ಅದೇ ಪ್ರದೇಶದಲ್ಲಿ ಇನ್ನೊಂದು ಅಂತಹುದೇ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.

ಉನ್ನಾವೋ(ಉತ್ತರ ಪ್ರದೇಶ): ಉನ್ನಾವೋದಲ್ಲಿ ಬೆಂಕಿಗಾಹುತಿಯಾದ ಅತ್ಯಾಚಾರ ಸಂತ್ರಸ್ಥೆ ಸಾವಿಗೀಡಾಗಿರುವ ಘಟನೆ ಕಣ್ಣೆದುರಿಗಿರುವಾಗಲೇ ಅದೇ ಪ್ರದೇಶದಲ್ಲಿ ಇನ್ನೊಂದು ಅಂತಹುದೇ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ. ಅದಕ್ಕೂ ಹೆಚ್ಚಿನ ವಿಚಿತ್ರವೆಂದರೆ "ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ" ಮಹಿಳೆ ಪೋಲೀಸರಿಗೆ ದೂರು ಸಲ್ಲಿಸಲು ಹೋದ ವೇಳೆ ಪೋಲೀಸರು ಆಕೆಯ ದೂರು ಸ್ವೀಕರೈಸಲು ನಿರಾಕರಿಸಿದ್ದಲ್ಲದೆ "ಅರ್ತಾಚಾರ ನಡೆದ ಮೇಲೆ ಬಾ, ದೂರು ತೆಗೆದುಕೊಳ್ಳುತ್ತೇವೆ" ಎಂಬ ಉಡಾಫೆ ಉತ್ತರ ನೀಡಿದ್ದಾರೆ.

"ಅತ್ಯಾಚಾರವೇನೂ ನಡೆದಿಲ್ಲವಲ್ಲ, ಅದು ನಡೆದ ನಂತರ ಬನ್ನಿ" ಎಂಬುದಾಗಿ ಠಾಣೆಯಲ್ಲಿದ್ದ ಪೋಲೀಸ್ ಅಧಿಕಾರಿಯೊಬ್ಬ ಮಹಿಳೆಗೆ ಹೇಳಿದ್ದಾನೆ. 

ಕೆಲ ತಿಂಗಳ ಹಿಂದೆ ತಾನು ಔಷಧಿಗಳನ್ನು ಖರೀದಿಸಲು ತೆರಳುತ್ತಿದ್ದ ವೇಳೆ ಗ್ರಾಮ್ದ ಮೂವರು ಪುರುಷರು ನನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದರು. ಆದರೆ ಈ ಕುರಿತು ದೂರು ದಾಖಲಿಸಿಕೊಳ್ಳಲು ಪೋಲೀಸರು ನಿರಾಕರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ. "ನಾನು ಔಷಧಿ ತೆಗೆದುಕೊಳ್ಳುವ ಸಲುವಾಗಿ ತೆರಳುತ್ತಿದ್ದೆ. ಆಗ ಮೂವರೂ ಪುರುಷರು ನನ್ನನ್ನು ಅಡ್ಡಗಟ್ಟಿ ಬಟ್ಟೆಗಳನ್ನು ಎಳೆಯಲು ಪ್ರಾರಂಭಿಸಿದರು. ಅವರು ನನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದರು"

ಮಹಿಳೆ ತನ್ನ ಮೇಲೆ ಎರಗಿದ್ದವರ ಗುರುತನ್ನೂ ಪತ್ತೆ ಮಾಡಿದ್ದಾಳೆ.ಆಕೆ ದೂರು ಸಲ್ಲಿಸಲು ತೆರಳಿದಾಗ "ನೀನೇನೂ ಅತ್ಯಾಚಾರಕ್ಕೆ ಒಳಗಾಗಿಲ್ಲ, ಅತ್ಯಾಚಾರ ನಡೆದ ಬಳಿಕ ಬಾ ಎಂದು ಹೇಳಿದ್ದಾರೆ.ತಾನು ಮೂರು ತಿಂಗಳಿನಿಂದ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದೇನೆ ಆದರೆ  ಯಾರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

"ಘಟನೆಯ ನಂತರ, ನಾನು 1090 (ಮಹಿಳಾ ಸಹಾಯವಾಣಿ) ಗೆ ಕರೆ ಮಾಡಿದೆ ಮತ್ತು ಅವರು ನನ್ನನ್ನು 100 ಡಯಲ್ ಮಾಡಲು ಕೇಳಿದರು. ಉನ್ನಾವೋ ಪೋಲೀಸರಿಗೆ ಮಾಹಿತಿ ನೀಡಲು ಹೇಳಿದ್ದಾರೆ. ಇದೀಗ ಮೂವರು ಆರೋಪಿಗಳು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ" ಮಹಿಳೆ ಆರೋಪಿಸಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭುಗಿಲೆದ್ದ ಬಂಡಾಯ, ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಶಶಿತರೂರ್: ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ, ಪಕ್ಷದ ಚುನಾವಣಾ ಸಭೆಗೆ ಗೈರು!

ಕೇರಳದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ತಿರುವನಂತಪುರವನ್ನು ಭಾರತದ ಉತ್ತಮ ನಗರವನ್ನಾಗಿ ಮಾಡುತ್ತೇವೆ: ಪ್ರಧಾನಿ ಮೋದಿ

ಆಕಸ್ಮಿಕ ಗುಂಡು ಹಾರಿ ಪತ್ನಿ ಸಾವು, ನೊಂದು ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ಸಂಸದನ ಅಳಿಯ!

IANS ಸುದ್ದಿ ಸಂಸ್ಥೆ ಈಗ ಸಂಪೂರ್ಣ ಅದಾನಿ ಗ್ರೂಪ್‌ ತೆಕ್ಕೆಗೆ!

'ಸುಷ್ಮಾ ಸ್ವರಾಜ್ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿ ಅಮಿತ್ ಶಾ ತುಪಕ್ ಅಂತಾ ಉಗ್ದಿದ್ದನ್ನು ಮರೆತಂತಿದೆ'

SCROLL FOR NEXT