ಸಂಗ್ರಹ ಚಿತ್ರ 
ದೇಶ

ಬಡ ಕುಟುಂಬ ದಿನಕ್ಕೆ 20 ಸಿಲಿಂಡರ್ ಬಳಕೆ ಮಾಡಲು ಹೇಗೆ ಸಾಧ್ಯ?: ಸಿಎಜಿ ಆಘಾತಕಾರಿ ವರದಿ

ಬಡ ಕುಟುಂಬವೊಂದು ದಿನಕ್ಕೆ 20 ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡಲು ಹೇಗೆ ಸಾಧ್ಯ ಎಂಬ ಗಂಭೀರ ಪ್ರಶ್ನೆಯನ್ನು ಸಿಎಜಿ (ಕಂಟ್ರೋಲರ್​ ಆ್ಯಂಡ್​ ಆಡಿಟರ್​ ಜನರಲ್ ಆಫ್​ ಇಂಡಿಯಾ​) ವರದಿ ಎತ್ತಿದೆ.

ನವದೆಹಲಿ: ಬಡ ಕುಟುಂಬವೊಂದು ದಿನಕ್ಕೆ 20 ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡಲು ಹೇಗೆ ಸಾಧ್ಯ ಎಂಬ ಗಂಭೀರ ಪ್ರಶ್ನೆಯನ್ನು ಸಿಎಜಿ (ಕಂಟ್ರೋಲರ್​ ಆ್ಯಂಡ್​ ಆಡಿಟರ್​ ಜನರಲ್ ಆಫ್​ ಇಂಡಿಯಾ​) ವರದಿ ಎತ್ತಿದೆ.

ಹೌದು.. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಬಡವರಿಗೆ ಅಡುಗೆ ಅನಿಲ ನೀಡುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ದುರ್ಬಳಕೆ ಆಗುತ್ತಿರುವುದಾಗಿ ಸಿಎಜಿ (ಕಂಟ್ರೋಲರ್​ ಆ್ಯಂಡ್​ ಆಡಿಟರ್​ ಜನರಲ್ ಆಫ್​ ಇಂಡಿಯಾ​) ವರದಿ ಮಾಡಿದೆ. ವರದಿಯಲ್ಲಿರುವಂತೆ ದಿನವೊಂದರಲ್ಲಿ ಒಬ್ಬರೇ ಫಲಾನುಭವಿ ಹಲವು ಬಾರಿ ರೀಫಿಲ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದು,  2 ರಿಂದ 20 ಎಲ್​ಪಿಜಿ ಸಿಲಿಂಡರ್​ ಅನ್ನು ಒಂದು ದಿನದಲ್ಲಿ ಒಬ್ಬರೇ ಫಲಾನುಭವಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ವಿತರಿಸಲಾಗಿರುವ 3.44 ಲಕ್ಷ ಪ್ರಕರಣಗಳು ಕಂಡುಬಂದಿದೆ.

ಇದೇ ಕಾರಣಕ್ಕೆ ಗೃಹ ಬಳಕೆಯ ಅಂದರೆ ದೈನಂದಿನ ಹೆಚ್ಚಿನ ಬಳಕೆಯು ಸಾಮಾನ್ಯ ಗ್ರಾಹಕರಲ್ಲಿ ಸಾಧ್ಯವಿಲ್ಲದಿರುವುದರಿಂದ ಗೃಹ ಬಳಕೆಗಾಗಿ ನೀಡಲಾಗಿರುವ ಎಲ್​ಪಿಜಿ ಸಂಪರ್ಕವು ವಾಣಿಜ್ಯಕ್ಕೆ ಬಳಕೆಯಾಗಿದೆ ಎಂದು ಸಿಎಜಿ ಸಂಶಯ ವ್ಯಕ್ತಪಡಿಸಿದೆ. ವಾಣಿಜ್ಯ ಎಲ್​ಪಿಜಿ ರೀಫಿಲ್​ ದರ ಅತ್ಯಧಿಕ ತೆರಿಗೆಯಿಂದ ಹೊರೆಯಾಗಿರುವ ಕಾರಣ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಗಳನ್ನೇ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಲ್​ಪಿಜಿ ಸಂಪರ್ಕವನ್ನು ಒದಗಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2016ರ ಮೇ ತಿಂಗಳಿನಲ್ಲಿ ಉದ್ಘಾಟನೆ ಮಾಡಲಾಯಿತು. ಹೊಗೆ ಮತ್ತು ಶುಚಿಯಲ್ಲದ ಇಂಧನದಿಂದ ಬಡವರನ್ನು ರಕ್ಷಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಯಿತು. 2020ರ ಗಡುವಿಗೂ ಏಳು ತಿಂಗಳು ಮುಂಚೆಯೇ 8 ಕೋಟಿ ಜನರಿಗೆ ಹೊಸ ಎಲ್​ಪಿಜಿ ಸಂಪರ್ಕ ಕೊಡಿಸುವ ಮೂಲಕ ಯೋಜನೆ ಯಶಸ್ಸು ಸಾಧಿಸಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT