ದೇಶ

'ನೀವು ಭಾರತೀಯರೆಂದು ತೋರಿಸಿ, ಬನ್ನಿ ನಮ್ಮ ಜೊತೆ ಕೈಜೋಡಿಸಿ': ಯುವಜನತೆ, ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿ ಕರೆ

Sumana Upadhyaya

ನವದೆಹಲಿ: ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರ ಬಿತ್ತುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸೋಮವಾರ ದೆಹಲಿಯ ರಾಜಘಾಟ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಇದಕ್ಕೆ ವಿದ್ಯಾರ್ಥಿಗಳು ಮತ್ತು ಯುವಜನತೆ ಕೈಜೋಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.


ದ್ವೇಷ, ಹಿಂಸಾಚಾರಗಳಿಂದ ಭಾರತ ನಾಶವಾಗಿಹೋಗಲು ಬಿಡಬಾರದು ಎಂದು ಸಹ ಅವರು ಒತ್ತಾಯಿಸಿದ್ದಾರೆ. ಪ್ರೀತಿಯ ವಿದ್ಯಾರ್ಥಿ ಮತ್ತು ಯುವಜನರೇ ಭಾರತದ ಇಂದಿನ ಪರಿಸ್ಥಿತಿಯಲ್ಲಿ ನೀವು ಭಾರತೀಯರು ಎಂದು ತೋರಿಸಿ ದ್ವೇಷದಿಂದ ಭಾರತ ತುಂಬಿ ಹೋಗಲು ಬಿಡಬೇಡಿ ಎಂದಿದ್ದಾರೆ.

SCROLL FOR NEXT