ಮುಜಾಫರ್ ನಗರ ಗಲಭೆ ಪ್ರಕರಣ: 7 ಜನರಿಗೆ ಜೀವಾವಧಿ ಶಿಕ್ಷೆ
ಮುಜಾಫರ್ ನಗರ: 2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದ್ದ ಗಲಭೆ ಪ್ರಕರಣದ 7 ಆರೋಪಿಗಳು ದೋಷಿಗಳೆಂದು ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮುಜಾಫರ್ ನಗರದಲ್ಲಿ ಇಬ್ಬರು ಸಹೋದರರನ್ನು ಹತ್ಯೆ ಮಾಡಿದ್ದರ ನಂತರದಲ್ಲಿ ಉಂಟಾಗಿದ್ದ ಗಲಭೆ ಪ್ರಕರಣದಲ್ಲಿ 7 ಜನರನ್ನೂ ಕೋರ್ಟ್ ಅಪರಾಧಿಗಳೆಂದು ತೀರ್ಪು ಪ್ರಕಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದ 5 ಅಪರಾಧಿಗಳು ಜೈಲಿನಲ್ಲೇ ಇದ್ದರೆ ಕಳೆದ ವರ್ಷ ಅಲ್ಲಹಾಬಾದ್ ಹೈಕೋರ್ಟ್ ಇಬ್ಬರಿಗೆ ಜಾಮೀನು ನೀಡಿತ್ತು.
ಶಹನವಾಜ್, ಇಬ್ಬರು ಸಹೋದರರಾದ ಗೌರವ್ ಹಾಗೂ ಸಚಿನ್ 2013 ರ ಆಗಸ್ಟ್ 27 ರಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹತ್ಯೆಯಾಗಿದ್ದರು. ಈ ಬಳಿಕ ಮುಜಾಫರ್ ನಗರದಲ್ಲಿ ಗಲಭೆ ಉಂಟಾಗಿತ್ತು. ಗಲಭೆಯಲ್ಲಿ 62 ಜನರು ಮೃತಪಟ್ಟಿದ್ದರು. 50,000 ಕ್ಕೂ ಹೆಚ್ಚು ಜನರು ವಲಸೆ ಹೋಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos