ದೇಶ

ಗುಂಡಿಕ್ಕಿ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕನ ಹತ್ಯೆ: ಬಿಜೆಪಿ ವಿರುದ್ಧ ಕೊಲೆ ಆರೋಪ ಮಾಡಿದ ಟಿಎಂಸಿ

Srinivas Rao BV
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ನ್ನು ಕೆಲವು ಅನಾಮಿಕ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 
ನಾಡಿಯಾ ಜಿಲ್ಲೆಯ ಸರಸ್ವತಿ ಪೂಜಾ ಟೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಇದು ಬಿಜೆಪಿ ಕೃತ್ಯ ಎಂದು ಟಿಎಂಸಿ ಆರೋಪಿಸಿದೆ.
ಆದರೆ ಆರೋಪ ನಿರಾಕರಣೆ ಮಾಡಿರುವ ಬಿಜೆಪಿ, ಇದು ಟಿಎಂಸಿ ಆಂತರಿಕ ಕಲಹದ ಪರಿಣಾಮ ಎಂದು ಪ್ರತ್ಯಾರೋಪ ಮಾಡಿದೆ. 
ಕೃಷ್ಣಗಂಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಸ್ವಾಸ್, ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸರಸ್ವತಿ ಪೂಜಾ ಟೆಂಟ್ ಗೆ ತೆರಳಿದ್ದರು. ಹತ್ಯೆಗೀಡಾಗಿದ್ದ ಟಿಎಂಸಿ ಕಾರ್ಯಕರ್ತ ಪೂಜೆಗೆ ತೆರಳಿದ್ದ ಪ್ರದೇಶದ ಜಿಲ್ಲೆ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿತ್ತು. 
ವೇದಿಕೆ ಮೇಲಿಂದ ಕೆಳಗಿಳಿಯುತ್ತಿದ್ದಾಗ ಬ್ಲಾಂಕ್ ರೇಂಜ್ ನಲ್ಲಿ ಟಿಎಂಸಿ ಶಾಸಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕೆರೆದೊಯ್ದರಾದರೂ ಆತ ಆ ವೇಳೆಗೆ ಮೃತಪಟ್ಟಿದ್ದ. 
SCROLL FOR NEXT