ದೇಶ

ಯಾರ ಬಳಿಯೂ ಮಂತ್ರದಂಡವಿಲ್ಲ: ಪ್ರಿಯಾಂಕಾ ರಾಜಕೀಯ ಎಂಟ್ರಿಗೆ ಪ್ರಶಾಂತ್ ಕಿಶೋರ್ ಪ್ರತಿಕ್ರಿಯೆ

Shilpa D
ಪಾಟ್ನಾ: ಪ್ರಿಯಾಂಕಾ ಗಾಂಧಿ ವಾದ್ರಾ ಎಂಟ್ರಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರಿ ಪರಿಣಾಮ ಬೀರುತ್ತಾರೆ ಎಂದು ಅನಿಸುತ್ತಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಅವರು ಪ್ರಭಾವಶಾಲಿಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ರಣತಂತ್ರ ನಿಪುಣ ಹಾಗೂ ಜೆಡಿಯು ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ  ಪ್ರಶಾಂತ್ ಕಿಶೋರ್, ಯಾರ ಬಳಿಯೂ ಮಾಯಾದಂಡವಿಲ್ಲ, ಲೋಕಸಭೆ ಚುನಾವಣೆಗೆ ಕೆವಲ ಎರಡು ಮೂರು ತಿಂಗಳು ಬಾಕಿಯಿರುವಾಗ ಬೃಹತ್ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.
ಆಕೆಗೆ ದೊಡ್ಡ ಹೆಸರಿದೆ ಹಾಗೂ ಜನಪ್ರಿಯರಾಗಿದ್ದಾರೆ, ಮುಂದಿನ ದಿನಗಳಲ್ಲಿ ಅಂದರೆ ದೀರ್ಘಾವಧಿಯಲ್ಲಿ ಎನ್ ಡಿಎಗೆ ಸವಾಲಾಗಬಹುದು ಎಂದು ಹೇಳಿದ್ದಾರೆ, ಕಳೆದ ತಿಂಗಳು ಪ್ರಿಯಾಂಕಾ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದಾರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶಕ್ಕೆ  ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ.
SCROLL FOR NEXT