ದೇಶ

ಭಾರತೀಯ ಸೇನಾ ಅಧಿಕಾರಿ ಕಪಾಳ ಮೋಕ್ಷಕ್ಕೆ ತತ್ತರಿಸಿ ನಡುಗಿದ್ದ ಜೈಶ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್!

Srinivas Rao BV
ನವದೆಹಲಿ: 2001 ರಲ್ಲಿ ಸಂಸತ್ ಮೇಲಿನ ದಾಳಿ, ನಂತರ ಮುಂಬೈ ನಲ್ಲಿ ಭಯೋತ್ಪಾದಕ ಕೃತ್ಯ, ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಈಗ 44 ಯೋಧರ ಜೀವ ತೆಗೆದಿರುವ ಪೈಶಾಚಿಕ ಸಂಘಟನೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹಿಂದೊಮ್ಮೆ ಭಾರತೀಯ ಸೈನಿಕರ ಕೈಗೆ ಸಿಕ್ಕಿಹಾಕಿಕೊಂಡಿದ್ದ. 
ಬಾಂಗ್ಲಾದೇಶದ ಮೂಲಕ ಭಾರತ ಪ್ರವೇಶಿಸಲು ಪೋರ್ಚುಗೀಸ್ ಪಾಸ್ಪೋರ್ಟ್ ನ್ನು ಬಳಕೆ ಮಾಡಿದ್ದ ಮಸೂದ್ ಅಜರ್ ನ್ನು 1994 ರಲ್ಲಿ ಅನಂತ್ ನಾಗ್ ನಲ್ಲಿ ಬಂಧಿಸಲಾಗಿತ್ತು. ವಿಚಾರಣೆ ನಡೆಸುತ್ತಿದ್ದ ವೇಳೆ ಮಸೂದ್ ಅಜರ್ ಕೆನ್ನೆಗೆ ಯೋಧರು ಸರಿಯಾಗೇ ಬಿಗಿದಿದ್ದರು. ಯೋಧರ ಹೊಡೆತಕ್ಕೆ ತತ್ತರಿಸಿ ನಡುಗಿದ್ದ ಮಸೂದ್ ಅಜರ್ ಬಳಿಕ ಸೇನೆಗೆ ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಭಯೋತ್ಪಾದಕ ಗುಂಪುಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಿದ್ದ. ಈ ಘಟನೆಯನ್ನು ಪುಲ್ವಾಮ ದಾಳಿಯ ಬೆನ್ನಲ್ಲೆ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ನೆನಪಿಸಿಕೊಂಡಿದ್ದಾರೆ. 
ಮಸೂದ್ ಅಜರ್ ನ್ನು ಸುಲಭವಾಗಿ ನಿರ್ವಹಿಸಬಹುದು. ಅಂದು ಸೇನಾ ಅಧಿಕಾರಿಯ ಹೊಡೆತಕ್ಕೆ ಮಸೂದ್ ಅಜರ್ ತತ್ತರಿಸಿ ನಡುಗಿದ್ದ ಎಂದು 1994 ರಲ್ಲಿ ಮಸೂದ್ ಅಜರ್ ನ್ನು ತನಿಖೆ ಮಾಡಿದ್ದ ಸಿಕ್ಕಿಂ ಪೊಲೀಸ್ ವಿಭಾಗದ ಪೊಲೀಸ್ ನಿರ್ದೇಶಕ ಅವಿನಾಶ್  ಮೊಹಾನನಿ ಹೇಳಿದ್ದಾರೆ. 
ಐಸಿ-814 ವಿಮಾನ ಹೈಜಾಕ್ ಹಿನ್ನೆಲೆಯಲ್ಲಿ ಭಯೋತ್ಪಾದಕರ ಬೇಡಿಕೆಯಂತೆ 1999 ರಲ್ಲಿ ಅಂದಿನ ಸರ್ಕಾರ ಮಸೂದ್ ಅಜರ್ ನ್ನು ಬಿಡುಗಡೆ ಮಾಡಿತ್ತು. ಇದಾದ ಬಳಿಕವೇ ಮಸೂದ್ ಅಜರ್ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಸ್ಥಾಪಿಸಿ ಭಾರತದ ಸಂಸತ್ ಮೆಲೆ, ಪಠಾಣ್ ಕೋಟ್ ವಾಯುನೆಲೆ ಮೇಲೆ, ಜಮ್ಮು-ಕಾಶ್ಮೀರದ ಸೇನಾ ಕ್ಯಾಂಪ್ ಗಳ ಮೇಲೆ, ಈಗ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾನೆ. 
SCROLL FOR NEXT