ಶ್ರೀನಗರ: ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 44 ಮಂದಿ ವೀರ ಯೋಧರು ಸಾವನ್ನಪ್ಪಿದ್ದಾರೆ. ಆದರೆ ಕಣಿವೆ ರಾಜ್ಯದಲ್ಲಿ ಸ್ಥಳೀಯರ ನೆರವಿಲ್ಲದೇ ಇಂತಹ ಹೀನ ಕೃತ್ಯವೆಸಗಲು ಉಗ್ರರಿಂದ ಸಾಧ್ಯವೇ ಇಲ್ಲ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ದೊರೆತಿದೆ.
ಹೌದು.. ಪುಲ್ವಾಮ ದಾಳಿ ಬೆನ್ನಲ್ಲೇ ಕಾಶ್ಮೀರದ ಸ್ಥಳೀಯರು ಉಗ್ರರಿಗೆ ನೆರವು ನೀಡುತ್ತಿರುವ ಮತ್ತು ಉಗ್ರರನ್ನು ಸ್ವತಂತ್ರ ಯೋಧರಂತೆ ಬಿಂಬಿಸಿ ಅವರಿಗೆ ಗೌರವ ನೀಡುತ್ತಿರುವ ಮತ್ತು ಸೇನಾ ಕಾರ್ಯಾಚರಣೆ ವೇಳೆ ಕುತಂತ್ರದಿಂದ ಕಲ್ಲು ತೂರಾಟದ ನೆಪದಲ್ಲಿ ಅವರನ್ನು ಪರಾರಿ ಮಾಡಿಸಲು ನೆರವು ನೀಡುತ್ತಿರುವ ಆಘಾತಕಾರಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೊಂದು ವಿಡಿಯೋ ದೇಶ ವಿರೋಧಿ ಕಾಶ್ಮೀರಿಗಳ ಭಂಡತನದ ಪ್ರದರ್ಶನ ಮಾಡುತ್ತಿದ್ದು, ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನಮ್ಮನ್ನು ಕಾಯುವ ನಮಗೆ ರಕ್ಷಣೆ ನೀಡುವ ಯೋಧರು ಗಡಿಯಲ್ಲಿ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ತಿಳಿಸುತ್ತದೆ.
ಆದರೆ ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಿದ್ದು, ವಿಡಿಯೋದಲ್ಲಿರುವ ಉಗ್ರರು ಯಾರು ಎಂಬುದರ ಬಗ್ಗೆ ಮಾಹಿತಿ ಇಲ್ಲ.