ನವದೆಹಲಿ: ದೇಶದ ರೈತರಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿರುವ ಕಿಸಾನ್ ಸಮ್ಮಾನ್ ಯೋಜನೆ ಮತಕ್ಕಾಗಿ ಲಂಚ ಎಂದು ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಪಿ ಚಿದಂಬರಂ ವ್ಯಾಖ್ಯಾನಿಸಿದ್ದಾರೆ.
ಇದನ್ನು ಚುನಾವಣಾ ಆಯೋಗಕ್ಕೆ ತಡೆಯಲು ಸಾಧ್ಯವಾಗದಿರುವುದು ಅತಿದೊಡ್ಡ ನಾಚಿಕೆಯ ಸಂಗತಿ ಎಂದು ಚಿದಂಬರಂ ಟೀಕಿಸಿದ್ದಾರೆ.