ದೇಶ

ಬುಡಕಟ್ಟು ಜನರ ಅರಣ್ಯ ಹಕ್ಕು: ತಾನೇ ನೀಡಿದ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

Nagaraja AB

ನವದೆಹಲಿ:  ಅರಣ್ಯ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಫೆಬ್ರವರಿ 13 ರಂದು ಸುಪ್ರೀಂಕೋರ್ಟ್ ತಾನೇ ನೀಡಿದ್ದ ಆದೇಶಕ್ಕೆ ಇಂದು  ತಡೆ ನೀಡಿದೆ.

ಅರಣ್ಯ ಹಕ್ಕು ನಿರ್ಣಯಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿ ಈ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವಂತೆ   ಅರಣ್ಯ ಹಕ್ಕು ನಿರ್ಣಯಿಸುವ ಪ್ರಕ್ರಿಯೆಗಳ ಬಗ್ಗೆ ರಾಜ್ಯಗಳು ಕೂಡಾ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿವೆ.
SCROLL FOR NEXT