ಪತ್ರಕರ್ತೆ ಚಿತ್ರ 
ದೇಶ

ಶಬರಿಮಲೆ: ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದರೂ ಕರ್ತವ್ಯ ನಿಷ್ಠೆ ಮೆರೆದ ಪತ್ರಕರ್ತೆ!

ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದರೂ ಅಳುತ್ತಲೇ ಕ್ಯಾಮರಾ ತೆಗೆಯುತ್ತಿದ್ದ ಪತ್ರಕರ್ತೆಯೊಬ್ಬರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಂಪ: ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶದಿಂದ ಕೇರಳ ರಾಜ್ಯಾದ್ಯಂತ  ಪ್ರತಿಭಟನೆ  ತೀವ್ರಗೊಂಡಿದ್ದು, ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದರೂ ಅಳುತ್ತಲೇ ಕ್ಯಾಮರಾ ತೆಗೆಯುತ್ತಿದ್ದ  ಪತ್ರಕರ್ತೆಯೊಬ್ಬರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿರುವನಂತಪುರದಲ್ಲಿ ಕೈರಾಳಿ ಟಿವಿ ಚಾನೆಲ್ ಕ್ಯಾಮರಾಮನ್   ಶಜಿಲ್ಲಾ ಅಬ್ಹುಲ್ ರೆಹಮಾನ್ ಮೇಲೆ  ಪ್ರತಿಭಟನಾಕಾರರು ಹಲ್ಲೆ ನಡೆಸಿ, ಕ್ಯಾಮರಾ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಕೆ ಅಳುತ್ತಲೇ  ತನ್ನ ಕರ್ತವ್ಯ ನಿರ್ವಹಿಸಿದ್ದು, ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಐದಾರು ಮಂದಿ ಹಿಂದಿನಿಂದ ಬಂದು ಕ್ಯಾಮರಾ ಕಸಿದುಕೊಂಡಾಗ ಏನು ಮಾಡಲು ಸಾಧ್ಯ, ಅವರು ಹಲ್ಲೆ ನಡೆಸಿದ್ದರಿಂದ ಕೆಳಗೆ ಬೀಳಬೇಕಾಯಿತು, ಇದರಿಂದ ಹಿಂದೆ ಚಿತ್ರೀಕರಿಸಿದ ದೃಶ್ಯಗಳೆಲ್ಲಾ ಹಾಳಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಶಜಿಲ್ಲಾ ಅಬ್ಹುಲ್ ರೆಹಮಾನ್  ಅವರ ಧೈರ್ಯ ಹಾಗೂ ಕರ್ತವ್ಯನಿಷ್ಠೆಗೆ ಟ್ವೀಟರ್ ನಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT