ಕಚ್ಚೋಕೆ ಬಂದ ನಾಯಿಗೆ ಕಲ್ಲೆಸೆದ ವ್ಯಕ್ತಿ ಗುಂಡೇಟಿಗೆ ಬಲಿ! 
ದೇಶ

ಕಚ್ಚೋಕೆ ಬಂದ ನಾಯಿಗೆ ಕಲ್ಲೆಸೆದ ವ್ಯಕ್ತಿ ಗುಂಡೇಟಿಗೆ ಬಲಿ!

ತನ್ನನ್ನು ಕಚ್ಚಲು ಬಂದ ನಾಯಿಗೆ ಕಲ್ಲೆಸಿದ್ದಕ್ಕೆ ಆ ನಾಯಿಯ ಮಾಲೀಕನಿಂದ ಗುಂಡೇಟು ತಿಂದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ.

ನವದೆಹಲಿ: ತನ್ನನ್ನು ಕಚ್ಚಲು ಬಂದ ನಾಯಿಗೆ ಕಲ್ಲೆಸಿದ್ದಕ್ಕೆ ಆ ನಾಯಿಯ ಮಾಲೀಕನಿಂದ ಗುಂಡೇಟು ತಿಂದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಈ ಘಟನೆ ಪಶ್ಚಿಮ ದೆಹಲಿಯ ವೆಲ್‍ಕಂ ಕಾಲೋನಿಯಲ್ಲಿ ನಡೆದಿದ್ದು  ಅಫಾಖ್(30)  ಎಂಬ ವ್ಯಕ್ತಿ ದುರಂತ ಸಾವಿಗೀಡಾಗಿದ್ದಾನೆ.
ಅಫಾಖ್ ಮುಂಜಾನೆ ರಸ್ತೆಯಲ್ಲಿ ನಡೆಯುತ್ತಿದ್ದಾಗ ಅವನನ್ನು ಕಂಡ ನಾಯಿ ಬೊಗಳಿತ್ತು, ಅಲ್ಲದೆ ಕಚ್ಚಲು ಸಹ ಪ್ರಯತ್ನಿಸಿದೆ. ಇದರಿಂದ ಕುಪಿತನಾದ ಆತ ಹತ್ತಿರದಲ್ಲೇ ಬಿದ್ದಿದ್ದ ಕಲ್ಲನ್ನು ನಾಯಿಯತ್ತ ಎಸೆದಿದ್ದಾನೆ. ಇದನ್ನು ಆ ನಾಯಿಯ ಮಾಲೀಕ ಮೆಹ್ತಾಬ್ ಗಮನಿಸಿದ್ದಾನೆ.
ತನ್ನ ನಾಯಿಗೆ ಕಲ್ಲು ಹೊಡೆದಿದ್ದ ಆ ವ್ಯಕ್ತಿಯನ್ನು ಕಂಡು ಆಕ್ರೋಶಗೊಂಡ ಮೆಹ್ತಾಬ್ ಮನೆಯಲ್ಲಿದ್ದ ಪಿಸ್ತೂಲ್ ತಂದು ಅಫಾಖ್ ಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ.ಇದಕ್ಕೆ ಮುನ್ನ ಇಬ್ಬರ ನಡುವೆ ಮಾತಿನ ಚಕಮಕಿ ನಡೆಇದೆ ಎನ್ನಲಾಗಿದ್ದು ಗುಂಡೇಟು ತಿಂದ ಅಫಾಖ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲನೀಡದ ಕಾರಣ ಆತ ಮರಣಿಸಿದ್ದಾನೆ.
ಇದೀಗ ಗುಂಡಿನ ದಾಳಿ ನಡೆಸಿದ್ದ ನಾಯಿ ಮಾಲೀಕ ಮೆಹ್ತಾಬ್ ನಾಪತ್ತೆಯಾಗಿದ್ದು ಪೋಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT