ಸಂಗ್ರಹ ಚಿತ್ರ 
ದೇಶ

ಹೆರಿಗೆ ಸಮಯದಲ್ಲಿ ಪುರುಷ ನರ್ಸ್ ನಿರ್ಲಕ್ಷ್ಯ: ಎರಡು ತುಂಡಾದ ಮಗು, ಗರ್ಭದಲ್ಲೇ ಉಳಿಯಿತು ಶಿಶುವಿನ ತಲೆ!

ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಿದ್ದ ಪುರುಷ ನರ್ಸ್ ಒಬ್ಬ ತನ್ನ ನಿರ್ಲಕ್ಷ್ದ ಕಾರಣ ಹಸುಗೂಸನ್ನು ಹೊರತೆಗೆವ ಸಮಯದಲ್ಲಿ ಎರಡು ಭಾಗವನ್ನಾಗಿಸಿದ ಆಘಾತಕಾರಿ ಘಟನೆ ರಾಜಸ್ಥಾನದ....

ರಾಮಗಢ(ರಾಜಸ್ಥಾನ): ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಿದ್ದ ಪುರುಷ ನರ್ಸ್ ಒಬ್ಬ ತನ್ನ ನಿರ್ಲಕ್ಷ್ದ ಕಾರಣ ಹಸುಗೂಸನ್ನು ಹೊರತೆಗೆವ ಸಮಯದಲ್ಲಿ ಎರಡು ಭಾಗವನ್ನಾಗಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.  ರಾಮಗಢ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುವ ಓರ್ವ ಪುರುಷ ನರ್ಸ್ ಈ ಕೃತ್ಯ ಎಸಗಿದ್ದಾನೆ.
ಘಟನೆ ನಂತರ ತಾಯಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸಿದ್ದಾಳೆ ಎನ್ನಲಾಗಿದೆ.
ವಿಷಯವೆಂದರೆ ಹೆರಿಗೆಯ ಸಮಯದಲ್ಲಿ ತಾಯಿಯ ಗರ್ಭದಿಂದ ಹಸುಗೂಸನ್ನು ಹೊರತೆಗೆವಾಗ ದಿವ್ಯ ನಿರ್ಲಕ್ಷ ತೋರಿದ ನರ್ಸ್ ಭ್ರೂಣವನ್ನು ಜೋರಾಗಿ ಎಳೆದಿದ್ದಾನೆ. ಆ ವೇಳೆ ಮಗು ಎರಡು ತುಂಡಾಗಿ ಹೊರಬಂದಿದೆ. ಇದರ ತರುವಾಯ ನರ್ಸ್ ಹಾಗೂ ಅವನ ಸಹೋದ್ಯೋಗಿಗಳು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದು ಹೆಚ್ಚುವರಿ ಚಿಕಿತ್ಸೆಗಾಗಿ ಗರ್ಭಿಣಿ ತಾಯಿಯನ್ನು  ಜೈಸಲ್ಮೇರ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ ಮಹಿಳೆಯ ಹೆರಿಗೆ ವೇಳೆ ಪ್ಲೆಸೆಂಟಾ (ಜರಾಯು ಅಥವಾ ಹೆರಿಗೆಯ ಕಸ)ವನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಡಲಾಗಿದೆ. ಇದಾಗಿ ಡಾ.ರವೀಂದ್ರ ಸಂಖ್ಲಾ ನೇತೃತ್ವದ ತಂಡ ಮಹಿಳೆಯನ್ನು ಪರಿಶೀಲಿಸಲಾಗಿ ಆಕೆಯ ಹೊಟ್ಟೆಯಲ್ಲಿ ಶಿಶುವಿನ ತಲೆ ಭಾಗವಿರುವುದು ಪತ್ತೆಯಾಗಿದೆ. ಈ ಕುರಿತಂತೆ ಅವರು ಗರ್ಭಿಣಿಯ ಸಂಬಂಧಿಗಳಿಗೆ ತಿಳಿಸಿದರು.
ಈ ಸಂಬಂಧ ಮಹಿಳೆಯ ಪತಿ ರಾಮಗಢದ ಆಸ್ಪತ್ರೆಯ ವಿರುದ್ಧ ದೂರು ಸಲ್ಲಿಸಿದ್ದರೂ ಪೋಲೀಸರು ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT