ಮೋದಿ-ಶಿವಕುಮಾರ ಸ್ವಾಮೀಜಿ 
ದೇಶ

ಪದ್ಮಭೂಷಣ ಪ್ರಶಸ್ತಿ ಪಡೆದ ವ್ಯಕ್ತಿಗೆ ಭಾರತ ರತ್ನ ನೀಡಲು ಕನಿಷ್ಟ 5 ವರ್ಷ ಕಾಯಬೇಕಾ? ಅಸಲಿಯತ್ತೇನು ಇಲ್ಲಿದೆ ಮಾಹಿತಿ

ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರಸ್ವಾಮಿಗಳಿಗೆ ಕೇಂದ್ರ ಸರ್ಕಾರ ಈ ಬಾರಿಯೂ ಭಾರತ ರತ್ನ ಪ್ರಶಸ್ತಿ ಘೋಷಿಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರಸ್ವಾಮಿಗಳಿಗೆ ಕೇಂದ್ರ ಸರ್ಕಾರ ಈ ಬಾರಿಯೂ ಭಾರತ ರತ್ನ ಪ್ರಶಸ್ತಿ ಘೋಷಿಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 
ಈ ನಡುವೆಯೇ ಶ್ರೀಗಳಿಗೆ ಈ ಬಾರಿ ಏಕೆ ಭಾರತ ರತ್ನ ಘೋಷಣೆ ಮಾಡಿಲ್ಲ ಎಂಬುದಕ್ಕೆ ಅನೇಕ ವಿಧವಾದ ವಿಶ್ಲೇಷಣೆಗಳು, ಸಮರ್ಥನೆಗಳೂ ಬರುತ್ತಿವೆ. ಈ ಪೈಕಿ ಪದ್ಮ ಪ್ರಶಸ್ತಿ ನೀಡಿದ ವ್ಯಕ್ತಿಗೆ ಯಾವುದೇ ಉನ್ನತವಾದ  ಪ್ರಶಸ್ತಿಯನ್ನು ನೀಡುವುದಕ್ಕೆ ಕನಿಷ್ಟ 5 ವರ್ಷಗಳಾಗಿರಬೇಕೆಂಬ ನಿಯಮವನ್ನು ಮುಂದಿಟ್ಟು ಪ್ರಶಸ್ತಿ ಘೋಷಣೆಯಾಗದೇ ಇರುವುದನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. 
ಇದಕ್ಕೆ ಸಾಕ್ಷ್ಯವನ್ನು ಒದಗಿಸಿರುವ ಸಾಮಾಜಿಕ ಜಾಲತಾಣದ ಹಲವು ಪೇಜ್ ಗಳು ಹಾಗೂ ವ್ಯಕ್ತಿಗಳು ಪದ್ಮ ಪ್ರಶಸ್ತಿಯನ್ನು ನೀಡುವುದಕ್ಕೆ ಇರುವ, ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿತ ಮಾನದಂಡಗಳನ್ನು ಉಲ್ಲೇಖಿಸುತ್ತಿದ್ದಾರೆ. ಇದರಲ್ಲಿ 
ಒಬ್ಬ ವ್ಯಕ್ತಿಗೆ ಈಗಾಗಲೇ ಪದ್ಮ ಪ್ರಶಸ್ತಿಯ ಯಾವುದೇ ಕೆಟಗರಿಯಲ್ಲಿ ಪ್ರಶಸ್ತಿ ಬಂದಿದೆ ಎಂದಾರೆ ಅದಕ್ಕಿಂತಲೂ ಉನ್ನತವಾದ ಪದ್ಮ ಪ್ರಶಸ್ತಿಯನ್ನು ನೀಡಲು ಕನಿಷ್ಟ 5 ವರ್ಷದ ವರೆಗೆ ಕಾಯಬೇಕೆಂಬ ನಿಯಮವಿದೆ. 
(A higher category of Padma award can be conferred on a person only where a period of at least five years has elapsed since conferment of the earlier Padma award.  ಎಂಬ ಸಾಲುಗಳನ್ನು ಉಲ್ಲೇಖಿಸಲಾಗುತ್ತಿದೆ. ಆದಾಗಿಯೂ, ವಿಶೇಷ ಸಂದರ್ಭಗಳಲ್ಲಿ ಒಂದು ಪದ್ಮ ಪ್ರಶಸ್ತಿ ನೀಡಿದ ಅದೇ ವ್ಯಕ್ತಿಯ ಸಾಧನೆಯನ್ನು ಪರಿಗಣಿಸಿ 5 ವರ್ಷಗಳಲ್ಲಿ ಮತ್ತೊಂದು ಪದ್ಮ ಪ್ರಶಸ್ತಿಯನ್ನು ನೀಡುವುದಕ್ಕೂ ವಿಶೇಷ ಅಧಿಕಾರವಿದೆ.  ಆದರೆ ಕನಿಷ್ಟ 5 ವರ್ಷಗಳ ನಿಯಮ ಪದ್ಮ ಪ್ರಶಸ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಭಾರತ ರತ್ನ ಪ್ರಶಸ್ತಿಗೆ ಅನ್ವಯವಾಗುವ ಬಗ್ಗೆ ಸ್ಪಷ್ಟ ಉಲ್ಲೇಖಗಳಿಲ್ಲ. ಇದಕ್ಕೆ ಪೂರಕವೆಂಬಂತೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಪದ್ಮ ಪ್ರಶಸ್ತಿ ನೀಡಿದ 5 ವರ್ಷಗಳ ಒಳಗಾಗಿಯೇ ಭಾರತ ರತ್ನ ಪ್ರಶಸ್ತಿಯೂ ಸಂದಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT