ದೇಶ

ಕಳೆದ 70 ವರ್ಷಗಳಲ್ಲಿ ಯಾವುದೇ ಒಬ್ಬ ಸನ್ಯಾಸಿಗೆ ಭಾರತ ರತ್ನ ಪುರಸ್ಕಾರ ಲಭಿಸಿಲ್ಲ: ಬಾಬಾ ರಾಮದೇವ್

Shilpa D
ನವದೆಹಲಿ: ಕಳೆದ 70 ವರ್ಷಗಳಿಂದ ಸಂತ ಸಮುದಾಯದ ಒಬ್ಬರೇ ಒಬ್ಬ ಸನ್ಯಾಸಿಗೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪುರಸ್ಕಾರ ಲಭಿಸಿಲ್ಲ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.
ಸನ್ಯಾಸಿಗಳಿಗೂ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿರುವ ರಾಮ್ ದೇವ್,ಕಳೆದ 70 ವರ್ಷಗಳಲ್ಲಿ ಒಬ್ಬ ಸನ್ಯಾಸಿಗೂ ಪುರಸ್ಕಾರ ದೊರೆತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಮುಂದಿನ ವರ್ಷ ಭಾರತ ರತ್ನ ಪುರಸ್ಕಾರ ನೀಡುವಾಗ ಸನ್ಯಾಸಿ ಒಬ್ಬರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಮಹರ್ಷಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.
SCROLL FOR NEXT