ಉತ್ತಮ್ ತಂತಿ 
ದೇಶ

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ, ಮಗಳನ್ನು ರಕ್ಷಿಸಿ ಹಿರೋ ಆದ 5ನೇ ತರಗತಿ ಬಾಲಕ

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ ಹಾಗೂ ಮಗಳನ್ನು ರಕ್ಷಿಸಿದ ಅಸ್ಸಾಂನ 11 ವರ್ಷದ ಬಾಲಕನೊಬ್ಬ ರಾತ್ರೋ ರಾತ್ರಿ ಹಿರೋ ಆಗಿದ್ದಾನೆ

ಗುವಾಹಟಿ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ ಹಾಗೂ ಮಗಳನ್ನು ರಕ್ಷಿಸಿದ ಅಸ್ಸಾಂನ 11 ವರ್ಷದ ಬಾಲಕನೊಬ್ಬ ರಾತ್ರೋ ರಾತ್ರಿ ಹಿರೋ ಆಗಿದ್ದಾನೆ.  ಆದಿವಾಸಿ ಸಮುದಾಯಕ್ಕೆ ಸೇರಿದ ಉತ್ತಮ್ ತಂತಿ ಈ ಸಾಧನೆ ಮಾಡಿದ್ದು,  ಆತನ ಹೆಸರನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದೆ.
ಈತನ ಪರಾಕ್ರಮ ಮುಖ್ಯಮಂತ್ರಿ ಸರ್ಬಾನಂದಾ ಸೊನಾವಾಲ್ ಅವರ ಮನ ಸೆಳೆದಿದೆ. ಉತ್ತಮ್ ತಂತಿಯ ಧೈರ್ಯವನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ನದಿಯಲ್ಲಿ ಮುಳುಗುತ್ತಿದ್ದ ತಾಯಿ ಮಗಳನ್ನು ರಕ್ಷಿಸಿದ ಆತನ ಧೈರ್ಯಕ್ಕೆ ಹ್ಯಾಟ್ಸ್ ಆಪ್ ಎಂದು ಟ್ವೀಟ್ ಮಾಡಿದ್ದಾರೆ.
ಭಾನುವಾರ  ನದಿಗೆ ಬೀಳುತ್ತಿದ್ದ 35 ವರ್ಷದ ಅಂಜಲಿ ಹಾಗೂ ಆಕೆಯ ಪುತ್ರಿ ಯರಾದ ರಿಯಾ ಮತ್ತು ದಿಪ್ತಿಯನ್ನು ಉತ್ತಮ್ ತಂತಿ ರಕ್ಷಿಸಿದ್ದಾನೆ. ನದಿಯ ಕಡೆಗೆ ಬರುತ್ತಿದ್ದ ಉತ್ತಮ್ ತಂತಿ,  ತನ್ನ ಪುತ್ರಿಯರೊಂದಿಗೆ ನೀರಿಗೆ ಬೀಳುತ್ತಿದ್ದ ತಾಯಿಯನ್ನು ನೋಡಿದ್ದಾನೆ. ತಕ್ಷಣ ನದಿಗೆ ಬಿದ್ದು, ಎರಡನೇ  ಪ್ರಯತ್ನದಲ್ಲಿ ಅಂಜಲಿ ಹಾಗೂ ರಿಯಾಳನ್ನು ರಕ್ಷಿಸಿದ್ದಾನೆ. ಆದರೆ, ದಿಪ್ತಿ ರಕ್ಷಣೆ ತಡವಾದರಿಂದ ಆಕೆ  ನೀರುಪಾಲಾಗಿದ್ದಾರೆ.
5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕನಿಗೆ ಬೈಸಿಕಲ್ ಹಾಗೂ ಹಣಕಾಸಿನ ನೆರವು ನೀಡುವ  ಸೊನಿತ್ ಪುರ್ ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.
ತಾಯಿ ಹಾಗೂ ಮಗಳು ನೀರಲ್ಲಿ  ಕೊಚ್ಚಿ ಹೋಗುತ್ತಿದ್ದಾಗ ನದಿಗೆ ಬಿದ್ದು ಅವರನ್ನು ರಕ್ಷಿಸಿರುವ ಈತನ ಧೈರ್ಯವಂತ. ಆತನ ಕುಟುಂಬದವರು ಬಡವರಾಗಿದ್ದು, ಸರ್ಕಾರದಿಂದ ಆರ್ಥಿಕ ನೆರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ನರ್ ಸಿಂಗ್ ಪವಾರ್ ಹೇಳಿದ್ದಾರೆ.
ಸನ್ಮಾನದ ಸಮಾರಂಭದಲ್ಲಿ ಆತ ದೇಶ ಕಾಯುವ ಯೋಧನಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದಾನೆ. ಸೇನೆಗೆ ಸೇರಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾನೆ. ಆತನ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ ನೆರವು ನೀಡುವುದಾಗಿ ಪವಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಧ್ಯಪ್ರದೇಶ: ಕಾಫ್ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯ; ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳ ಮರಣ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

BiggBoss Kannada: ಬಿಗ್ ಬಾಸ್ 12 ಮನೆಗೆ ಬೀಗಮುದ್ರೆ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?

ರಾಜಕೀಯ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದ್ದಾರೆ: BJP ಟೀಕೆ

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ

ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಬೇಡಿ: ಕುರುಬ ಸಮುದಾಯ ST ಸೇರ್ಪಡೆ ಪ್ರಸ್ತಾಪಕ್ಕೆ VS ಉಗ್ರಪ್ಪ ವಿರೋಧ

SCROLL FOR NEXT