ನುಸ್ರತ್ ಜಹಾನ್ 
ದೇಶ

ಈದ್ ವೇಳೆ ನನಗೆ ಜೈ ಶ್ರೀರಾಮ್ ಸಂದೇಶಗಳು ಬಂದಿತ್ತು: ಸಂಸದೆ ನುಸ್ರತ್ ಜಹಾನ್

ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಲೋಕಸಭೆಯಲ್ಲಿ ಪ್ರಮಾಣ ವಚನ ಪಡೆಯುತ್ತಿದ್ದಾಗ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ, ಬಳೆ ಹಾಕಿಕೊಂಡಿದ್ದು ಸುದ್ದಿಯಾಗಿದ್ದರು.

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಲೋಕಸಭೆಯಲ್ಲಿ ಪ್ರಮಾಣ ವಚನ ಪಡೆಯುತ್ತಿದ್ದಾಗ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ, ಬಳೆ ಹಾಕಿಕೊಂಡಿದ್ದು ಸುದ್ದಿಯಾಗಿದ್ದರು. ಇನ್ನು ಇದೀಗ ತಮಗೆ ಈದ್ ವೇಳೆ ಜೈ ಶ್ರೀರಾಮ್ ಎಂಬ ಸಂದೇಶಗಳು ಬರುತ್ತಿದ್ದವು ಎಂದು ಹೇಳಿದ್ದಾರೆ.
ನುಸ್ರತ್ ಜದಾನ್ ಅವರು ದೇವರ ಹೆಸರನ್ನು ಘೋಷಣೆ ಕೂಗೂವುದರಲ್ಲಿ ಏನು ತಪ್ಪಿಲ್ಲ. ಆದರೆ ಬೇರೆಯವರನ್ನು ಕೆರಳಿಸುವ ರೀತಿ ಘೋಷಣೆ ಕೂಗಬಾರದು. ಆ ರೀತಿ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಇನ್ನು ನನಗೆ ಈದ್ ಸದರ್ಶದಲ್ಲಿ ಶುಭಾಶಯದ ರೀತಿ ಜೈ ಶ್ರೀರಾಮ್ ಎಂದು ಸಾವಿರಾರು ಸಂದೇಶಗಳು ಬರುತ್ತಿದ್ದವು. ನಾನು ಅವುಗಳಿಗೆ ಪ್ರತಿಕ್ರಿಯಿಸಲು ಹೋಗಲಿಲ್ಲ. ಶಾಲಾ ದಿನಗಳಲ್ಲೇ ಭಾರತ ಜಾತ್ಯತೀತ ರಾಷ್ಟ್ರ ಎಂದು ಓದಿಕೊಂಡು ಬಂದಿದ್ದೇವೆ. ಅದರಂತೆ ನಾವೆಲ್ಲರೂ ಬದುಕಬೇಕು ಎಂದರು. 
ನಸ್ರುತ್ ಜೈನ ಧರ್ಮೀಯನ್ನು ವಿವಾಹವಾಗಿದ್ದರು. ಇದು ಮುಸ್ಲಿಂ ಧರ್ಮಕ್ಕೆ ವಿರೋಧ ಎಂದು ಹೇಳಿ ಮುಸ್ಲಿಂ ಮೌಲ್ವಿ ಮುಫ್ತಿ ಅಸಾದ್ ವಾಸ್ಮೀ ಫತ್ವಾ ಹೊರಡಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT