ದೇಶ

ದೊಣ್ಣೆಯಿಂದ ಥಳಿಸಿ ಪೊಲೀಸ್ ಪೇದೆಯ ಬರ್ಬರ ಹತ್ಯೆ!

Vishwanath S
ಜೈಪುರ: ಆಸ್ತಿ ವಿವಾದ ಸಂಬಂಧ ತನಿಖೆಗೆ ತೆರಳಿದ್ದ ಪೊಲೀಸ್ ಪೇದೆ ಮೇಲೆ ನಾಲ್ಕೈದು ಆಗುಂತಕರ ತಂಡ ದೊಣ್ಣೆಗಳಿಂದ ಥಳಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ರಾಜಸ್ತಾನದ ರಾಜ್ಸಾಮಂಡ್ ಡಿಲ್ಲೆಯ ಹಮೇಲಾ ಕಿ ಬೆರ್ ಗ್ರಾಮಕ್ಕೆ 48 ವರ್ಷದ ಅಬ್ದುಲ್ ಗನಿ ಎಂಬುವರು ತೆರಳಿದ್ದರು. ತನಿಖೆ ಬಳಿಕ ವಾಪಸ್ಸಾಗುತ್ತಿದ್ದಾಗ ತಂಡವೊಂದು ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷನ್ ತಿಳಿಸಿದ್ದಾರೆ. 
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ಗನಿಯವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 
SCROLL FOR NEXT