ದೇಶ

ಅನಗತ್ಯ ಹೇಳಿಕೆ ನೀಡುವವರು 'ಧರ್ಮ' ಇಲ್ಲದವರು: ಸಚಿವ ಗಿರಿರಾಜ್ ಸಿಂಗ್ ವಿರುದ್ಧ ನಿತೀಶ್ ಕುಮಾರ್ ಟೀಕೆ

Sumana Upadhyaya
ಪಾಟ್ನಾ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಟೀಕಿಸಿ ಹೇಳಿಕೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸುದ್ದಿಯಲ್ಲಿರಬೇಕೆಂದು ಅನಗತ್ಯವಾಗಿ ಹೇಳಿಕೆಗಳನ್ನು ನೀಡುವವರಿಗೆ ಯಾವುದೇ ಧರ್ಮವಿರುವುದಿಲ್ಲ ಎಂದಿದ್ದಾರೆ.
ಕೇಂದ್ರ ಸಚಿವ ಗಿರಿರಾಜ್ ಹೇಳಿದ್ದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸದಾ ಸುದ್ದಿಯಲ್ಲಿರಬೇಕೆಂದು ಕೆಲವರು ಅನಗತ್ಯವಾಗಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ, ಹಾಗಾದರೂ ಮಾಧ್ಯಮಗಳಲ್ಲಿ ಬರಬೇಕೆಂಬುದು ಅವರ ಆಸೆ. ನಮ್ಮ ದೇಶದ ಪ್ರತಿ ಧರ್ಮದಲ್ಲಿ ಜನರಿಗೆ ಪ್ರೀತಿ ಗೌರವಗಳನ್ನು ತೋರಿಸುವುದನ್ನು ಹೇಳಿಕೊಡುತ್ತಾರೆ, ಆದರೆ ಇಂತವರಿಗೆ ಯಾವುದೇ ಧರ್ಮವಿಲ್ಲ ಎಂದು ನಿತೀಶ್ ಕುಮಾರ್ ಇಂದು ಪಾಟ್ನಾದಲ್ಲಿ ಮುಸಲ್ಮಾನ ಬಾಂಧವರ ಜೊತೆ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
SCROLL FOR NEXT