ಕೊಲ್ಕೋತಾ: ಜೂನ್ 15ರಂದು ನಡೆಯುವ ನೀತಿ ಆಯೋಗದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಸಾಮರ್ಥ್ಯವಿಲ್ಲ, ರಾಜ್ಯಗಳಿಗೆ ಇದರಿಂದ ಯಾವುದೇ ಹಣಕಾಸಿನ ಸಹಾಯವಾಗುವುದಿಲ್ಲ, ನೀತಿ ಆಯೋಗಕ್ಕೆ ಯಾವುದೇ ಪವರ್ ಇಲ್ಲ ಎಂದು ಮಮತಾ ಪತ್ರದಲ್ಲಿ ಬರೆದಿದ್ದಾರೆ.
ಈ ಮೊದಲು ಯೋಜನಾ ಆಯೋಗ ಏರ್ಪಡಿಸಿದ್ದ ಥಿಂಕ್ ಥ್ಯಾಂಕ್ ಸಭೆಗೂ ಗೈರಾಗಿದ್ದರು. ಜೂನ್ 15ರಂದು ಪ್ರಧಾನಿ ಮೋದಿ,ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ.