ದೇಶ

ಕಥುವಾ ಅತ್ಯಾಚಾರ ತಿರ್ಪು: ಒಮರ್, ಮೆಹಬೂಬಾ ಮುಫ್ತಿ ಸ್ವಾಗತ

Raghavendra Adiga
ಶ್ರೀನಗರ: ಕಥುವಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಪಠಾಣ್ ಕೋಟ್ ನ್ಯಾಯಾಲಯದ ತೀರ್ಪನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಸ್ವಾಗತಿಸಿದ್ದಾರೆ.
"ಅಪರಾಧಿಗಳು ಕಾನೂನಿನ ಅಡಿಯಲ್ಲಿಗಂಭೀರ ಶಿಕ್ಷೆಗೆ ಅರ್ಹರಾಗಿದ್ದಾರೆ ಮತ್ತು ಆಪಾದಿತರನ್ನು ಸಮರ್ಥಿಸಿಕೊಂಡಿದ್ದ ರಾಜಕಾರಣಿಗಳಿಗೆ ಇದರಿಂದ ತಕ್ಕ ಪಾಠ ಕಲಿತಂತಾಗಿದೆ.ಕಾನುನು ಎಲ್ಲಕ್ಕಿಂತ ದೊಡ್ಡದು" ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
"ಎಂಟು ವರ್ಷದ ಬಾಲಕಿಯನ್ನು ಮಾದಕ ವ್ಯಸನಿಗಳು ಅತ್ಯಾಚಾರ ನಡೆಸಿ ಕ್ರೂರವಾಗಿ ಶಿಕ್ಷಿಸಿದ್ದರು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿಲೋಪವಿಲ್ಲ ಎಂದು ಭರವಸೆ ಇಡುತ್ತೇನೆ. ಅಪರಾಧಿಗಳು ಕಠಿಣತಮ ಶಿಕ್ಷೆಗೆ ಗುರಿಯಾಗಲಿದ್ದಾರೆ"ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಕಥುವಾ ಜಿಲ್ಲೆಯ ರಸ್ನಾ ಪ್ರದೇಶದಲ್ಲಿ ಮುಸ್ಲಿಂ ಅಲೆಮಾರಿ ಜನಾಂಗದ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು ಬಳಿಕ ಕ್ರೂರವಾಗಿ ಕೊಂದು ಹಾಕಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದಲ್ಲಿ ಏಳು ಆರೋಪಿಗಳ ಪೈಕಿ ಆರು ಆರೋಪಿಗಳನ್ನು ಪಠಾಣ್ ಕೋಟ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.
SCROLL FOR NEXT