ದೇಶ

ವಾರಾಣಸಿ: ಮಂದಿರಗಳ ಬಳಿ ಮದ್ಯ, ಮಾಂಸಾಹಾರಕ್ಕೆ ನಿಷೇಧ

Srinivas Rao BV
ವಾರಾಣಸಿ: ವಾರಾಣಸಿಯಲ್ಲಿ ಮಂದಿರ, ಪಾರಂಪರಿಕ ಕಟ್ಟಡಗಳ 250 ಮೀಟರ್ ಸುತ್ತಳತೆಯಲ್ಲಿ ಮದ್ಯ ಮಾರಾಟ, ಮಾಂಸಾಹರ ಮಾರಾಟ, ಸೇವನೆಯನ್ನು ನಿಷೇಧಿಸಲಾಗಿದೆ. 
ವಾರಾಣಸಿ, ವೃಂದಾವನ, ಅಯೋಧ್ಯೆ, ಚಿತ್ರಕೂಟ, ದೇವೋಬಂದ್, ದೇವ ಶರೀಷ್, ಮಿಸ್ರಿಖ್-ನೈಮಿಷಾರಣ್ಯ ಸೇರಿದಂತೆ ಉತ್ತರ ಪ್ರದೇಶದ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಮದ್ಯ, ಮಾಂಸ ಮಾರಾಟ, ಸೇವನೆಗೆ ಬ್ರೇಕ್ ಹಾಕುವುದಾಗಿ ಯೋಗಿ ಆದಿತ್ಯನಾಥ್ ಏಪ್ರಿಲ್ ನಲ್ಲಿ ಭರವಸೆ ನೀಡಿದ್ದರು. ಕಾಶಿ ವಿಶ್ವನಾಥ ಮಂದಿರ, ಮಥುರಾದಲ್ಲಿರುವ ಶ್ರೀ ಕೃಷ್ಣ ಜನ್ಮಸ್ಥಳ ಪ್ರಯಾಗ್ ರಾಜ್ (ಅಲ್ಲಹಾಬಾದ್) ಗಳಲ್ಲಿ ಈಗ ಮದ್ಯ, ಮಾಂಸಾಹಾರ ಮಾರಾಟ, ಸೇವನೆಗೆ ಬ್ರೇ ಹಾಕಲಾಗಿದೆ. 
SCROLL FOR NEXT