ಅಸಾದುದ್ದೀನ್ ಓವೈಸಿ 
ದೇಶ

'ಜೈ ಶ್ರೀರಾಮ್'ಗೆ ಪ್ರತಿಯಾಗಿ 'ಜೈ ಭೀಮ್‌, ತಕ್ಬೀರ್‌, ಅಲ್ಲಾ ಹು ಅಕ್ಬರ್‌' ಘೋಷಣೆ ಕೂಗಿದ ಓವೈಸಿ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಿಜೆಪಿ ಸಂಸದರು...

ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಿಜೆಪಿ ಸಂಸದರು ಜೈ ಶ್ರೀರಾಮ್, ಭಾರತ್‌ ಮಾತಾ ಕೀ ಜೈ , ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. 
ಹೈದರಾಬಾದ್ ಸಂಸದ ಓವೈಸಿ ಅವರು ಪ್ರಮಾಣವಚನ ಸ್ವೀಕರಿಸಲು ಸ್ಪೀಕರ್ ಮುಂದಿನ ಸದನ ಬಾವಿಗೆ ಬರುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಜೈ ಶ್ರೀರಾಮ್, ಭಾರತ್‌ ಮಾತಾ ಕೀ ಜೈ , ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಆಗ ಓವೈಸಿ ಕೂಗಿರಿ, ಕೂಗಿರಿ ಎಂದು ಹೇಳುತ್ತಲೆ ಮೈಕ್ ಬಳಿಗೆ ಬಂದು ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೆ ಕೊನೆಯಲ್ಲಿ 'ಜೈ ಭೀಮ್‌... ಜೈ ಭೀಮ್‌, ತಕ್ಬೀರ್‌, ಅಲ್ಲಾ ಹು ಅಕ್ಬರ್‌, ಜೈ ಹಿಂದ್‌,' ಎಂದು ಘೋಷಣೆ ಕೂಗಿ ಹಿಂದಿರುಗಿದರು. ಓವೈಸಿ ಅವರ ಈ ಘೋಷಣೆಯನ್ನೂ ಕೆಲ ಸಂಸದರು ಅಣಕಿಸಿದರು. 'ಓ...,' ಎಂದು ಕೂಗಿದರು.
ಬಳಿಕ ಸಂಸತ್‌ನ ಹೊರಗೆ ಮಾತನಾಡಿದ ಅಸಾದುದ್ದೀನ್‌ ಓವೈಸಿ, ಇದು ಒಳ್ಳೆಯ ವಿಚಾರ ಯಾಕೆಂದರೆ ಅವರಿಗೆ ನನ್ನನ್ನು ನೋಡಿದ ತಕ್ಷಣ ಈ ವಿಚಾರಗಳು ನೆನಪಾಗುತ್ತವೆ. ಅವರಿಗೆ ಸಂವಿಧಾನ ಮತ್ತು ಮುಜಾಫ‌ರಪುರ್‌ನಲ್ಲಿ ಮಕ್ಕಳ ಸಾವಿನ ವಿಚಾರಗಳು ನೆನಪಿನಲ್ಲಿವೆ ಎಂದು ಭಾವಿಸುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT