ದೇಶ

ಛತ್ತೀಸ್ ಗಢ: ಕುಟುಂಬ ಸದಸ್ಯರ ಎದುರೇ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ನಕ್ಸಲರು

Srinivas Rao BV
ರಾಯ್ ಪುರ್: ನಕ್ಸಲರು ಪೊಲೀಸ್ ಅಧಿಕಾರಿಯನ್ನು ಕುಟುಂಬ ಸದಸ್ಯರ ಎದುರೇ ಹತ್ಯೆ ಮಾಡಿರುವ ಘಟನೆ ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ. 
ವಾರಕ್ಕೊಮ್ಮೆ ನಡೆಯುವ ಹಾತ್ ಬಜಾರ್ (ವಾರದ ಮಾರುಕಟ್ಟೆ)ಯಲ್ಲಿ ಈ ಘಟನೆ ನಡೆದಿದ್ದು, ಸಹಾಯಕ ಪೇದೆ ಚೈತು ರಾಮ್ ಮೃತರೆಂದು ಗುರುತಿಸಲಾಗಿದೆ. 
ಮಿರ್ತೂರ್ ನ ನಿವಾಸಿಯಾಗಿದ್ದ ಚೈತು ರಾಮ್ ಅವರು ಕುಟುಂಬ ಸದಸ್ಯರೊಂದಿಗೆ ಮಾರುಕಟ್ಟೆಗೆ ತೆರಳಿದ್ದರು. ಈ ವೇಳೆ ಮಾವೋವಾದಿಗಳ ತಂಡ ಮಾರಕಾಸ್ತ್ರಗಳಿಂದ ಚೈತುರಾಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅವರ ಕುಟುಂಬ ಸದಸ್ಯರ ಮೇಲೆ ಯಾವುದೇ ದಾಳಿ ನಡೆಸಿಲ್ಲ. 
ಪೊಲೀಸ್ ಪೇದೆಯ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಕೊಲೆಗಡುಕ ನಕ್ಸಲರಿಗಾಗಿ ಶೋಧ ಕಾರ್ಯ ನಡೆಸಿದೆ.
SCROLL FOR NEXT