ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತದಾನದ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಇತ್ತೀಚೆಗೆ ಭಾರತೀಯ ಚುನಾವಣಾ ಆಯೋಗ ಸೆಕ್ಷನ್ 49ಪಿ ಬಗ್ಗೆ ಅರಿವು ಮೂಡಿಸುವ ಜಾಹೀರಾತು ನೀಡಿದೆ, ತಮ್ಮ ಮತಗಳು ದುರುಪಯೋಗವಾಗುವುದಿಲ್ಲ ಎಂಬುದನ್ನು ತಿಳಿಸಿದೆ.
ಚುನಾವಣಾ ಸಿಬ್ಬಂದಿಯ ಪ್ರಮಾದದಂತಹ ನಾನಾ ಕಾರಣಗಳಿಂದ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಂಡ ಪರಿಸ್ಥಿತಿಯಲ್ಲಿ ಮತ್ತೆ ಮತ ಚಲಾಯಿಸುವ ಅವಕಾಶವನ್ನು ಈ ಸೆಕ್ಷನ್ 49ಪಿ ಕಲ್ಪಿಸುತ್ತದೆ.
ಟೆಂಡರ್ ವೋಟಿಂಗ್ ಬಗ್ಗೆ ತಿಳಿಸುವ ಸೆಕ್ಷನ್ 49ಪಿ ಈಗ ಬೆಳಕಿಗೆ ಬರಲು ಕಾರಣ ತಮಿಳು ನಟ ವಿಜಯ್ ನಟಿಸಿರುವ 'ಸರ್ಕಾರ್' ಸಿನಿಮಾ. ಮುರುಗದಾಸ್ ನಿರ್ದೇಶನದಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗಿದ್ದು ಸೆಕ್ಷನ್ 49ಪಿ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ.
ಚಿತ್ರದ ಹೀರೋ ಮತ ಚಲಾಯಿಸಲು ಅಮೆರಿಕದಿಂದ ಭಾರತಕ್ಕೆ ಬರುತ್ತಾನೆ. ಆದರೆ ತನ್ನ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ತಿಳಿದು ಬೇಸರಗೊಳ್ಳುತ್ತಾನೆ. ಚುನಾವಣಾ ನಿಯಮಗಳಲ್ಲಿನ ಸೆಕ್ಷನ್ 49ಪಿ ಮೂಲಕ ತನಗೆ ಮತ ಚಲಾಯಿಸುವ ಹಕ್ಕು ಕಲ್ಪಿಸಬೇಕೆಂದು ಕೋರ್ಟ್ ಮೆಟ್ಟಿಲೇರುತ್ತಾನೆ. ಕೋರ್ಟ್ ಅವರ ಪರವಾಗಿ ತೀರ್ಪು ನೀಡುತ್ತದೆ. ಇದರಿಂದ ಮತದಾನದ ಹಕ್ಕು ಕಳೆದುಕೊಂಡ ಲಕ್ಷಾಂತರ ಮಂದಿ ಇದೇ ಹಾದಿ ಹಿಡಿಯುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos