ದೇಶ

ಜಗನ್ ಮೋಹನ್ ರೆಡ್ಡಿಗೆ 'ನಾಯ್ಡು ಭಯ '- ನಾರಾ ಲೋಕೇಶ್

Nagaraja AB

ಗುಂಟೂರು: ವೈಎಸ್ ಆರ್ ಕಾಂಗ್ರೆಸ್  ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ನಾಯ್ಡು ಭಯದಿಂದ ನರಳುತ್ತಿದ್ದಾರೆ ಎಂದು ಆಂಧ್ರಪ್ರದೇಶ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಆರೋಪಿಸಿದ್ದಾರೆ.

ಮಾಂಗಲ್ ಗಿರಿಯಲ್ಲಿ  ಟಿಡಿಪಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು,ಜಗನ್ ಒಬ್ಬ ನಾಟಕಕಾರ, ಕೆಸಿ ಚಂದ್ರಶೇಖರ್ ಇನ್ನೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸದಿರುವುದರಿಂದ ವೈಎಸ್ ಆರ್ ಕಾಂಗ್ರೆಸ್ ಕೂಡಾ ಇನ್ನೂ ಪಟ್ಟಿ ಬಿಡುಗಡೆ ಮಾಡಿಲ್ಲ. ಪುಲಿವೆಂದುಲಾ ಕ್ಷೇತ್ರಕ್ಕೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕೆಸಿಆರ್ ಹುಡುಕುತ್ತಿದ್ದಾರೆ ಎಂದು ಹೇಳಿದರು.

ಜಗನ್ ಮೋಹನ್ ರೆಡ್ಡಿ ನಾಯ್ಡು ಭಯದಿಂದ ನರಳುತ್ತಿದ್ದಾರೆ. ಒಂದು ಬಾರಿ ಸಭೆಯಲ್ಲಿ ಹಸುವನ್ನು ನೋಡಿದ ಜಗನ್ , ಇದನ್ನು ಚಂದ್ರಬಾಬು ನಾಯ್ಡು ಕಳುಹಿಸಿದ್ದರು ಎಂದು ಹೇಳಿದ್ದರು. ಅವರ ಹೆಸರು ಹೇಳದೆ ಜಗನ್ ಬದುಕಲು ಸಾಧ್ಯವಿಲ್ಲ ಎಂದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟಿಆರ್ ಎಸ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಾರನ್ನು ವೈಎಸ್ ಆರ್ ಕಾಂಗ್ರೆಸ್ ಮುಖಂಡರು ಬಳಸುತ್ತಿದುದ್ದನ್ನು ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಲಾಗಿತ್ತು ಎಂದು ಅವರು ಆರೋಪಿಸಿದರು.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅನೇಕ ಕೆಲಸಗಳನ್ನು ಮಾಡಿರುವುದಾಗಿ ಹೊಗಳಿದ ನಾರಾ ಲೋಕೇಶ್,  ಅವರ 40 ವರ್ಷಗಳ ಅನುಭವದಲ್ಲಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.  ಜನರು ಟಿಡಿಪಿಗೆ ಮತ ಚಲಾಯಿಸುವ ಮೂಲಕ ಹೊಸ ಇತಿಹಾಸ ಬರೆಯಬೇಕೆಂದು ಮನವಿ ಮಾಡಿಕೊಂಡರು.

SCROLL FOR NEXT