ರಾಯಪುರ: ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸೋನಿಯಾಗಾಂಧಿ ಆಪ್ತ ವಡಕ್ಕನ್ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲಘುವಾಗಿ ಮಾತನಾಡಿದ್ದಾರೆ.
ಒಡಿಶಾ ಪ್ರವಾಸಕ್ಕೂ ಮುನ್ನ ರಾಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ವಡಕ್ಕನ್ ? ಎಂದು ಪ್ರಶ್ನಿಸಿದರಲ್ಲದೇ, ವಡಕ್ಕನ್ ದೊಡ್ಡ ನಾಯಕರಲ್ಲ ಎಂದರು.
ಬಾಲಕೋಟ್ ಸ್ಟ್ರೈಕ್ ನಂತರ ಕಾಂಗ್ರೆಸ್ ಪಕ್ಷದ ನಿಲುವಿನಿಂದ ಬೇಸರಗೊಂಡು ಕೇರಳದ ಟಾಮ್ ವಡಕ್ಕನ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಿರುದ್ಯೋಗ , ರೈತರ ಸಮಸ್ಯೆಗಳು, ರಾಫೆಲ್ ಒಪ್ಪಂದ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.